ಕೋಣ ಕುರಿಗಳ ಬಲಿ ನೀಡುವ ಮೂಲಕ ಕಾನೂನು ಉಲ್ಲಂಘಿಸಬೇಡಿ: ಪಿಐ ಆನಂದರಾವ್

0
118

ಸುರಪುರ: ಸರಕಾರ ಯಾವುದೇ ಜಾತ್ರೆಗಳಲ್ಲಿ ಬಹಿರಂಗವಾಗಿ ಕೋಣ ಕುರಿಗಳನ್ನು ಬಲಿ ಕೊಡುವ ಪದ್ಧತಿಯನ್ನು ನಿರ್ಬಂಧಿಸಿದ್ದು,ಅದರಂತೆ ನಿಮ್ಮ ಗ್ರಾಮದಲ್ಲಿ ನಡೆಯುವ ದ್ಯಾವಮ್ಮ,ಮರೆಮ್ಮ ಕೆಂಚಮ್ಮ ದೇವರ ಜಾತ್ರೆಗಳಲ್ಲಿ ಕೋಣ ಕುರಿಗಳನ್ನು ಬಲಿ ನೀಡುವ ಮೂಲಕ ಕಾನೂನನ್ನು ಉಲ್ಲಂಘಿಸಬೇಡಿ ಎಂದು ಪೊಲೀಸ್ ಇನ್ಸ್ಪೇಕ್ಟರ್ ಆನಂದರಾವ್ ತಿಳಿಸಿದರು.

ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಇದೇ ತಿಂಗಳು ೨೪ ರಿಂದ ನಡೆಯುವ ಗ್ರಾಮದೇವತೆ ಹಾಗು ಇತರ ದೇವರುಗಳ ಜಾತ್ರೆಗಳಲ್ಲಿ ಕೋಣ ಕುರಿಗಳನ್ನು ಬಲಿ ನೀಡುವುದನ್ನು ತಡೆಯುವಂತೆ ಇತ್ತೀಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ನೇತೃತ್ವದಲ್ಲಿ ಮನವಿ ಮಾಡಲಾಗಿತ್ತು.ಇದಕ್ಕೆ ಸ್ಪಂಧಿಸಿ ರವಿವಾರ ಗ್ರಾಮದಲ್ಲಿ ಜಾಗೃತಿ ಸಭೆ ನಡೆಸಿ ಮಾತನಾಡಿ,ಯಾವುದೆ ಪ್ರಾಣಿಗಳನ್ನು ದೇವರ ಹೆಸರಲ್ಲಿ ಸಾರ್ವಜನಿಕವಾಗಿ ಹತ್ಯೆ ಮಾಡುವುದು ಕಾನೂನಿನ ಉಲ್ಲಂಘನೆಯಾಗಿದ್ದು,ಇದರಿಂದ ಮೂಢ ನಂಬಿಕೆಯನ್ನು ಬಿತ್ತಿದಂತಾಗಲಿದೆ.ಅಲ್ಲದೆ ಸಾರ್ವಜನಿಕ ಪ್ರಾಣಿವಧೆಯಿಂದ ಪರಿಸರವು ಹಾಳಾಗಲಿದೆ ಇದಕ್ಕೆ ತಳವಾರಗೇರಾದ ಸಾರ್ವಜನಿಕರು ಅವಕಾಶ ಮಾಡಿಕೊಡದಂತೆ ತಿಳಿಸಿದರು.

Contact Your\'s Advertisement; 9902492681

ಒಂದು ವೇಳೆ ಕಾನೂನು ಉಲ್ಲಂಘಿಸಿ ಕೋಣ ಕುರಿಗಲ ಬಲಿಯನ್ನು ನಡೆಸಿದಲ್ಲಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.ಇದಕ್ಕೆ ಸ್ಪಂಧಿಸಿದ ಗ್ರಾಮಸ್ಥರು ಕೋಣ ಕುರಿಗಳ ಬಲಿಯನ್ನು ನೀಡದೆ ಹೋಳಿಗೆ ಹುಗ್ಗಿ ಮಾಡಿ ದೇವಿ ಜಾತ್ರೆ ಆಚರಿಸುವುದಾಗಿ ಭರವಸೆ ನೀಡಿದರು.ಸಭೆಯ ವೇದಿಕೆ ಮೇಲೆ ಪಿಎಸ್‌ಐ ಶರಣಪ್ಪ ಹವಲ್ದಾರ,ಪ್ರೋಬೆಷನರಿ ಪಿಎಸ್‌ಐ ಸಿದ್ದೇಶ್ವರ ಇದ್ದರು ಗ್ರಾಮದ ಅನೇಕ ಜನತೆ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here