ಜಮಲಮ್ಮ ದೇವಿ ಸಾಂಸ್ಕೃತಿಕ ಸಂಘ ಉದ್ಘಾಟನೆ

0
24

ಆಳಂದ: ತಾಲೂಕಿನ ಕಿಣ್ಣಿ ಸುಲ್ತಾನ ಗ್ರಾಮದ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಶನಿವಾರ ಜಮಲಮ್ಮ ದೇವಿ ಸಾಂಸ್ಕೃತಿಕ ಕಲಾವಿದರ ಸಂಘವನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಉದ್ಘಾಟಿಸಿದರು.

ಗಡಿಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ, ಸಂಗೀತ ಕಲಾ ಪ್ರಕಾರಗಳನ್ನು ಮುಂದುವರೆಸಿಕೊಂಡು ಹೋಗಲು ಈ ಸಾಂಸ್ಕೃತಿಕ ಸಂಘವನ್ನು ಹುಟ್ಟು ಹಾಕಲಾಗಿದೆ. ಸಾನಿಧ್ಯವನ್ನು ಶಿವಶಾಂತಲಿಂಗ ಶಿವಾಚಾರ್ಯರು ವಹಿಸಿದ್ದರು. ತಾ.ಪಂ ಸದಸ್ಯ ಸಿದ್ದಾರಾಮ ವಾಗ್ಮಡೆ, ವಿಜಯಕುಮಾರ ಹುಲಸೂರೆ, ಅಪ್ಪು ಸ್ವಾಮಿ, ಬಸವರಾಜ ಅತ್ತೆ, ಪ್ರಕಾಶ ಬಿರಾದಾರ, ಪರಮೇಶ್ವರ ಮೂಲಗೆ, ಪಂಡಿತ ಪಾಟೀಲ, ಬಾಬುರಾವ ಸುಳ್ಳದ, ರಾಜೇಂದ್ರ ಮೂಲಗೆ, ಸಂಘದ ಅಧ್ಯಕ್ಷ ವಿಜಯಕುಮಾರ ಆಳಂದ, ಕಲಾವಿದರಾದ, ಅಶೋಕ ಆಳಂದ, ಮಹಾಂತೇಶ ಚವಡಾಪುರ, ಪ್ರಸಾದ ಮಂಠಾಳ, ಸುರೇಶ ಆಳಂದ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here