ನಾಗಮಂಗಲ: ತಾಲೂಕು ಆಡಳಿತ ವಿರುದ್ಧ ಸಾರ್ವಜನಿಕರ ಆಕ್ರೋಶ

0
38

ನಾಗಮಂಗಲ: ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮಿನಿ ವಿಧಾನಸೌಧ ಕಚೇರಿ ಆಡಳಿತ ಶಕ್ತಿ ಕೇಂದ್ರ ವಾಗಿದ್ದು, ಎರಡು ತಿಂಗಳಿಂದ ತಹಸೀಲ್ದಾರ್ ಇಲ್ಲದೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ.

ಈ ಹಿಂದೆ ಜನವರಿ ತಿಂಗಳಲ್ಲಿ ತಹಸಿಲ್ದಾರ್ ಅಧಿಕಾರವಹಿಸಿಕೊಂಡ ಎಂ.ವಿ ರೂಪ ಕಾರ್ಯನಿರ್ವಹಿಸುತ್ತಿದ್ದರು.
ಸರ್ಕಾರದ ಆದೇಶದಂತೆ ಅಕ್ಟೋಂಬರ್ ತಿಂಗಳಲ್ಲಿ ಎಂ. ವಿ ರೂಪ ರವರು ಶ್ರೀರಂಗಪಟ್ಟಣಕ್ಕೆ ವರ್ಗಾವಣೆಗೊಂಡರು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರಭಾರವಾಗಿ ನಾಗಮಂಗಲದಲ್ಲಿ ಕಾರ್ಯನಿರ್ವಹಿಸುವಂತೆ ಆದೇಶಿಸಿದರು.

Contact Your\'s Advertisement; 9902492681

ಸುಮಾರು ಎರಡು ತಿಂಗಳಿಂದ ರೈತರು ಹಾಗೂ ನಾಗರಿಕರು ಪ್ರತಿನಿತ್ಯ ಕಚೇರಿಗೆ ಅಲೆದು ಕೆಲಸವಾಗದೆ ಬರಿಗೈಯಲ್ಲಿ ಹಿಂತಿರುಗು ತಿರುವುದು ದುರದೃಷ್ಟಕರವಾಗಿದೆ. ತಾಲೂಕು ಕಚೇರಿಯ ದಂಡಾಧಿಕಾರಿಗಳ ಅಧೀನದಲ್ಲಿರುವ ಜನನ-ಮರಣ, ಭೂಮಿ-ಶಾಖೆ, ಕೋರ್ಟ್ ಕೇಸು,ಆರ್.ಟಿ.ಸಿ ಭೂಮಾಪನ ಇಲಾಖೆ, ಆಹಾರ ಇಲಾಖೆ. ಹೀಗೆ ಹಲವಾರು ಇಲಾಖೆಗಳಿದ್ದು ಸುಮಾರು 50 ಜನ ಗ್ರಾಮಲೆಕ್ಕಾಧಿಕಾರಿಗಳು ನಾಲ್ಕು ಜನ ಶಿರಸ್ತೇದಾರರು, ಕಚೇರಿ ನೌಕರರು 5 ಜನ ಉಪತಹಸೀಲ್ದಾರರು, ಗ್ರಾಮಸಹಾಯಕರು ನೂರಾರು ಜನರಿದ್ದು ತಾಲೂಕಿನಾದ್ಯಂತ ನಾಲ್ಕು ಉಪ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ತಾಲ್ಲೂಕಿನ ತಹಸೀಲ್ದಾರ್ ಇಲ್ಲದೆ ಜನತೆಯ ಕೆಲಸಗಳು ಹಿಂದುಳಿದಿದ್ದು, ಇನ್ನಾದರೂ ಪಾಂಡವಪುರ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ತಹಸಿಲ್ದಾರ್ ಅವರನ್ನು ನೇಮಕ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಾಗಮಂಗಲ ತಾಲೂಕಿನಲ್ಲಿ ದಂಡಾಧಿಕಾರಿಗಳು ಇಲ್ಲದೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here