ವಿಶ್ವ ಮಾನವ ಕುವೆಂಪು ಜನ್ಮದಿನಾಚರಣೆ ನಿಮಿತ್ತ ಸಹಸ್ರ ಸಹಭೋಜನ ಕಾರ್ಯಕ್ರಮ

0
116

ಕಲಬುರಗಿ: ಪ್ರತಿಯೊಬ್ಬ ಮನುಷ್ಯರು ವಿಶ್ವಮಾನವರಾಗಿರಬೇಕು ಎನ್ನುವ ಮಹದಾಶೆಯನ್ನು ಬೀರಿದ ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ ದಿನವೆ ವಿಶ್ವ ಮಾನವ ಕುವೆಂಪು ಜನ್ಮದಿನಾಚರಣೆ ಎಂದು ಹಿರಿಯ ಹೋರಾಟಗಾರರಾದ ಶಿವಲಿಂಗಪ್ಪ ಕಿನ್ನೂರ ಹೇಳಿದರು.

ಇಂದು ನಗರದ ಶಮ್ಸ್ ಫಂಕ್ಷನ್ ಪ್ಯಾಲೇಸ್ ವಿಶ್ವ ಮಾನವ ಕುವೆಂಪು ಜನ್ಮದಿನಾಚರಣೆ ನಿಮಿತ್ತವಾಗಿ ರಾಜ್ಯಾದ್ಯಂತ ನಡೆದ ಸಹಸ್ರ ಸಹಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಭೌಮ, ಜಾತ್ಯಾತೀತ, ಸಮಾಜವಾದಿ,  ಪ್ರಜಾತಂತ್ರ ಗಣರಾಜ್ಯದ ಆಶಯವೇ ನಮ್ಮ ದೇಶದ ಸಂವಿಧಾನದ ಜೀವಾಳವೂ ಆಗಿದ್ದು, ಸಂವಿಧಾನದ ಪ್ರಸ್ತಾವನೆ ಎಲ್ಲರಿಗೂ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

Contact Your\'s Advertisement; 9902492681

ಸಮಾರಂಭ ಉದ್ದೇಶಿ ಮಾತನಾಡಿ, ಜಾತ್ಯಾತೀತ ಸೌಹಾರ್ದ ಪರಂಪರೆಯ ಆಶಯಕ್ಕೆ ದಕ್ಕೆಯಾಗುವಂತ ವಾತವಾರಣ ಸೃಷ್ಟಿಯಾಗುತ್ತಿರುವುದು ವಿಶಾದನೀಯ. ಘನತೆಯಿಂದ ನೆಮ್ಮದಿಯಾಗಿ ಬದುಕಬೇಕೆಂದರೆ ಮನುಷ್ಯಪ್ರೀತಿ ಸಂಬಂಧಗಳು, ಸೌಹಾರ್ದತೆ ಪಸರಿಸಬೇಕು. ಹಾಗಾಗಿ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ದಲಿತರು, ಮಹಿಳೆಯರು, ವಿದ್ಯಾರ್ಥಿಗಳು ಜೊತೆಗೂಡಿ ಕರ್ನಾಟಕದ  ಸಾವಿರ ಕಡೆಗಳಲ್ಲಿ ಸಂವಿಧಾನದ ಮುನ್ನುಡಿಯ ಓದು ಮತ್ತು ಜೊತೆಗೆ ಸಹಭೋಜನ ಮಾಡುವ ಕಾರ್ಯಕ್ರಮ ಕರ್ನಾಟಕದಾದ್ಯಾಂತ ನಡೆಯುತ್ತಿದ್ದು, ಈ ಕಾರ್ಯ ಮುಂದು ವರೆಯಬೇಕೆಂದು ತಿಳಿಸಿದರು.

ಇಂದು ಕಲಬುರಗಿಯಲ್ಲಿಯೂ ಯಾವುದೇ ನಿರ್ಧಿಷ್ಟ ಸಂಘಟನೆಯ ಬ್ಯಾನರ್  ಹೆಸರು ಇಲ್ಲದೆ ಎಲ್ಲರೂ ಜೊತೆಗೂಡಿ ಈ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಎಲ್ಲಾ ಧರ್ಮ, ಜಾತಿಯವರು ನಾವೆಲ್ಲರೂ ಸೌಹಾರ್ದತೆಯಿಂದ ಬದುಕುವ ವಿಶ್ವ ಮಾನವರಾಗಿದ್ದೇವೆ. ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಕಟ್ಟಲಿದ್ದೇವೆ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಕೀಲರಾದ ಭೀಮನಗೌಡ ಪರಗೊಂಡ ಮಾತನಾಡಿದರು. ಪ್ರಾಸ್ತವಿಕವಾಗಿ ರಾಜೇಂದ್ರ ರಾಜವಾಳ ಮಾತನಾಡಿದ್ದು, ಶರಣು ಕೋಲಿ ಕಾರ್ಯಕ್ರಮದ ನಿರೂಪಿಸಿದರು. ನಾಗರಾಜ ಯಡ್ರಾಮಿ ವಂದನಾರ್ಪಣೆಮಾಡಿದರು.

ಕಾರ್ಯಕ್ರಮದಲ್ಲಿ ಶರಣು ಜೇವರ್ಗಿ, ದೇವೇಂದ್ರ ಚಿಗರಳ್ಳಿ, ಸುದರ್ಶನ್ ದೆಗಾಂವ, ವಿಜಯಕುಮಾರ್ ರಾಠೋಡ್, ಬಸವರಾಜ್, ಮಾಂತೇಶ್,  ಉಪಸ್ಥಿತಿ ಸೇರಿದಂತೆ ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ನಂತರ ಸಹ ಭೋಜನ ಕಾರ್ಯಕ್ರಮ ಜರುಗಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here