ತಾಲೂಕಾ ಪ್ರಥಮ ಜಾನಪದ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಎಲ್ ಬಿ ಕೆ ಆಲ್ದಾಳ ಆಯ್ಕೆ

0
81

ಯಡ್ರಾಮಿ: ಫೆಬ್ರವರಿ ತಿಂಗಳಲ್ಲಿ  ಯಡ್ರಾಮಿಯಲ್ಲಿ ನಡೆಯಲಿರುವ ಪ್ರಥಮ ತಾಲೂಕಾ ಜಾನಪದ ಸಾಹಿತ್ಯ  ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ನಾಟಕ ರಚನೆಕಾರ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ  ಎಲ್ ಬಿ ಕೆ ಆಲ್ದಾಳ ಅವರನ್ನುಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು (ರಿ) ಯಡ್ರಾಮಿ ತಾಲೂಕಾ ಅಧ್ಯಕ್ಷ ನಾಗಪ್ಪ ಸಜ್ಜನ್ ಅವರು ತಿಳಿಸಿದ್ದಾರೆ.

ಪಟ್ಟಣದ ವಿರಕ್ತ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ  ಈ ಕುರಿತಂತೆ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಸಮ್ಮೇಳನದಲ್ಲಿ ಜನಪದ ಸಂಸ್ಕೃತಿಯನ್ನು  ಬಿಂಬಿಸುವ ಮೆರವಣಿಗೆ ಇರಲಿದೆ. ಇದರಲ್ಲಿ ರಾಜ್ಯದ ಅನೇಕ ಜಾನಪದ ಕಲಾ ತಂಡಗಳು ಹಾಗೂ ಸ್ಥಳೀಯ ಕಲಾ ತಂಡಗಳು ಭಾಗವಹಿಸಲಿವೆ.ಜಾನ ಪದ ವಸ್ತುಗಳ ಪ್ರದರ್ಶನವು ಇರಲಿದೆ. ಪ್ರಥಮ ಜನಪದ ಸಮ್ಮೇಳನದ ಸವಿನೆನಪಿಗಾಗಿ ಡಾ.ಗಿರೀಶ ರಾಠೋಡ ಸಂಪಾದಕತ್ವದಲ್ಲಿ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರಮುಖರಾದ ಮಹಾಲಿಂಗಪ್ಪಗೌಡ, ಸಿದ್ದನಗೌಡ ಮಾಲಿ ಪಾಟೀಲ,ಗುರು ಬಸ್ಸಪ್ಪ ಸಣ್ಣಳ್ಳಿ, ಎಲ್ ಬಿ ಕೆ ಆಲ್ದಾಳ, ಬಾಬಾಗೌಡ ಕುಳಗೇರಿ, ರೇವಣಸಿದ್ದಯ್ಯಾ ಪುರಾಣಿಕ,ಬಸ್ಸೆಟಪ್ಪ ವಾರದ, ಬಸವರಾಜ ಬೋರಗಿ, ಸಂತೋಷ ಕೊಡೆಕಲ್, ಸಾಹೇಬಗೌಡ, ಡಾ. ಕೆ.ಕೆ ದೇಸಾಯಿ, ಭೀಮರಾಯಗೌಡ ಹಿರೇಗೌಡ, ಯಲ್ಲಾಲಿಂಗ ಹರನಾಳ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಈ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here