ರಾಷ್ಟ್ರೀಯ ಯುವ ದಿನ ಯುವ ಸಪ್ತಾಹ ಕಾರ್ಯಕ್ರಮ ಸಂಸದ ಡಾ. ಜಾಧವ್ ಉದ್ಘಾಟನೆ

0
62

ಕಲಬುರಗಿ: ಇಂದು ಶರಣ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಹಾಗೂ ನೆಹರು ಯುವ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಇಂದು “ಸ್ವಾಮಿ ವಿವೇಕಾನಂದರ” ಜನ್ಮದಿನಾಚರಣೆ ಹಾಗೂ ‘ರಾಷ್ಟ್ರೀಯ ಯುವ ದಿನ’ ಯುವ ಸಪ್ತಾಹ ಕಾರ್ಯಕ್ರಮವನ್ನು ಸಂಸದರಾದ ಡಾ. ಉಮೇಶ ಜಾಧವ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಶರಣ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ನರ್ಸಿಂಗ್ ಕೌನ್ಸಿಲ್, ನಿರ್ದೇಶಕರಾದ ದಿವ್ಯಾ ಆರ್‌.ಹಾಗರಗಿ, ನೆಹರು ಯುವ ಕೇಂದ್ರದ ಜಿಲ್ಲಾ ಸಂಯೋಜಕರಾದ ಡಿ. ದಯಾನಂದ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಕಲಬುರಗಿ ಅಧ್ಯಕ್ಷರಾದ ಸಿದ್ರಾಮಯ್ಯಾ ಎಸ್. ಹಿರೇಮಠ ಮತ್ತು ಎನ್.ಎಸ್.ಎಸ್ ಸಂಯೋಜಕರಾದ ಪ್ರೊ. ದಯಾನಂದ ಎಸ್. ಹೊಡಲ ಅವರು ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದು, ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here