ಕಲಬುರಗಿಯಲ್ಲಿ 21ಕ್ಕೆ ಪೌರತ್ವ ವಿರುದ್ಧ ಜನಾಂದೋಲನ: ಶಾಸಕಿ ಕನೀಜ್ ಫಾತೀಮಾ ಅವರಿಂದ ಸ್ಥಳ ಪರಿಶೀಲನೆ

0
80

ಕಲಬುರಗಿ: ಇದೇ 21 ರಂದು ನಗರ ಪೀರ್ ಬಂಗಾಲಿ ಮೈದಾನದಲ್ಲಿ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರೋಧಿಸಿ ಬೃಹತ್ ಜನಾಂದೋಲನ ಆಯೋಜಿಸಲಾಗಿದ್ದು, ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರು ಪೊಲೀಸ್ ಉಪ ಆಯುಕ್ತರ ನೇತೃತ್ವದಲ್ಲಿ ಪೀರ್ ಬಂಗಾಲಿ ಮೈದಾನಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಎನ್ ನಾಗರಾಜ, ಉಪ ಪೊಲೀಸ್ ಆಯುಕ್ತರಾದ ಕಿಶೋರ ಬಾಬು, ಶಾಸಕಿಯ ಪುತ್ರ ಫರಾಜು ಉಲ್ ಇಸ್ಲಾಂ,ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಸೈಯದ್ ಅಹ್ಮದ್, ಮಝರ್ ಆಲಂ ಖಾನ್, ಆದೀಲ್ ಸುಲೇಮಾನ್ ಸೇಠ್, ನಾಸೀರ್ ಹುಸೇನ್ ಉಸ್ತಾದ್, ನ್ಯಾಯವಾದಿ ವಾಹಾಜ್ ಬಾಬಾ, ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಡಾ. ಅಜಗರ್ ಚುಲಬುಲ್ ಸೇರಿದಂತೆ ಮುಂತಾದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here