ಸುರಪುರ ಇತಿಹಾಸದ ಕುರಿತು ನಾಟಕ ರಚಿಸಿ ಅಭಿನಯಿಸಿ: ರಾಜಾ ಮದನಗೋಪಾಲ ನಾಯಕ

0
161

ಸುರಪುರ: ಎಲ್ಲರೂ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರೆ ನಟಿಸಿರುವ ರಸಗಂಗಾಧರ ನಾಟಕವು ಅನೇಕ ಸಂದೇಶವುಳ್ಳ ಅದ್ಭುತವಾದ ನಾಟಕವಾಗಿದೆ ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಅಭಿನಯಿಸಲ್ಪಟ್ಟ ರಸಗಂಗಾಧರ ನಾಟಕ ವೀಕ್ಷಣೆಯ ನಂತರ ಮಾತನಾಡಿ,ವಿಕ್ರಮ ವಿಸಾಜಿಯವರು ಒಳ್ಳೆಯ ನಾಟಕ ರಚನೆ ಮಾಡಿದ್ದಾರೆ.ಇದರಲ್ಲಿ ಸಾಹಿತ್ಯದ ಜೊತೆಗೆ ಸಮಾಜದಲ್ಲಿನ ಸಾಮರಸ್ಯ ಮತ್ತು ಸೌಹಾರ್ಧತೆಯನ್ನು ಎತ್ತಿ ಹಿಡಿಯುವ ಸಂದೇಶವಿದೆ.ಇಂತಹ ಒಂದು ಒಳ್ಳೆಯ ನಾಟಕವನ್ನು ನಿರ್ದೇಸಿದ ಶಂಕ್ರಯ್ಯ ಗಂಟಿಯವರಿಗೆ ಮತ್ತು ಎಲ್ಲಾ ಕಲಾಅವಿದರಿಗೆ ವಂದನೆಗಳನ್ನು ಸಲ್ಲಿಸಿದರು.ನಮ್ಮ ಸುರಪುರದ ಇತಿಹಾಸವು ಭವ್ಯವಾಗಿದೆ.ರಾಣಿ ಈಶ್ವರಮ್ಮನ ಕುರಿತು ಎಲ್.ಬಿ.ಕೆ.ಆಲ್ದಾಳವರು ನಾಟಕ ರಚಿಸಿದ್ದಾರೆ.ಶಿಘ್ರದಲ್ಲಿ ಅದೂ ಪ್ರದರ್ಶನವಾಗಲಿದೆ.ಅದರಂತೆ ಸುರಪುರ ಇತಿಹಾಸದ ಕುರಿತು ನಾಟಕ ರಚಿಸಿ ಅಭಿನಯಿಸುವಂತೆ ಕಲಾ ತಂಡದಲ್ಲಿ ಮನವಿ ಮಾಡಿದರು.

Contact Your\'s Advertisement; 9902492681

ನಾಟಕದ ನಿರ್ದೇಶಕ ಶಂಕ್ರಯ್ಯ ಗಂಟಿ ಮಾತನಾಡಿ,ಬಿ.ಎ.ವಿದ್ಯಾರ್ಥಿಗಳ ಪಠ್ಯಕ್ಕಿರುವ ಈ ನಾಟಕವನ್ನು ಸುಮಾರು ೨೦ ಪ್ರಯೋಗ ಮಾಡಿಸುವ ಉದ್ದೇಶವಿದೆ.ಇದು ಹನ್ನೆರಡನೆ ಪ್ರಯೋಗವಾಗಿದೆ ಎಂದರು.ನಾಟಕದ ಕುರಿತು ತಾವೆಲ್ಲರು ಅಭಿಪ್ರಯಾ ತಿಳಿಸಿದರೆ ಇನ್ನೂ ಹೆಚ್ಚಿನ ಕಾಳಜಿವಹಿಸಿ ಅಭಿನಯಿಸಲು ಅನುಕೂಲವಾಗಲಿದೆ ಎಂದರು.
ಮುಖಂಡ ದೇವೆಂದ್ರಪ್ಪ ಹೆಗ್ಗಡೆ ಮಾತನಾಡಿ,ಇಂತಹ ಒಂದು ಅಮೋಘವಾದ ನಾಟಕದ ಪ್ರದರ್ಶನಕ್ಕೆ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರು ವ್ಯವಸ್ಥೆ ಕಲ್ಪಿಸಿದ್ದಾರೆ ಅವರಿಗೆ ಎಲ್ಲರು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.ಅಲ್ಲದೆ ಈ ನಾಟಕದಲ್ಲಿ ನಮ್ಮ ಕಲ್ಯಾಣ ಕರ್ನಾಟಕ ಭಾಗದವರೇ ಎಲ್ಲಾ ಕಲಾವಿದರು ಅಭಿನಯಿಸುತ್ತಿರುವುದು ಹೆಚ್ಚಿನ ಸಂತಸ ತಂದಿದೆ ಎಂದರು.ನಂತರ ಬಲಭೀಮ ದೇಸಾಯಿ,ರಾಹುಲ್ ಹುಲಿಮನಿ ನಾಟಕದ ಕುರಿತು ಮಾತನಾಡಿದರು.

ನಾಟಕದಲ್ಲಿ ಜಗದೀಶ ಕಲಬುರ್ಗಿ,ಅಂಬ್ರೇಶ ಪೂಜಾರಿ,ಪ್ರಸಾದ ಎನ್.ಶೆಳ್ಳಿಗಿ,ಭೈರವ ಪೂಜಾರಿ,ವಿನೂತ ಹುಬ್ಳಿ,ರೋಹಿತ ಕಲಬುರ್ಗಿ,ಅಶೋಕ ಕುಮಾರ ಕಲಬುರ್ಗಿ,ಕೃಷ್ಣಾ,ಅಪೂರ್ವ ನಂದದಾಸ್ ವಿವಿಧ ಪಾತ್ರಗಳ ಮೂಲಕ ಅಭಿನಯಿಸಿದರು. ಮದಸೂಧನ ಮಾಸ್ತಾರ್ ಸಂಚಿಕೆ ನಿರ್ದೇಶಿಸಿದರು,ವಿಜಯಲಕ್ಷ್ಮೀ ವಸ್ತ್ರಾಲಂಕಾರ, ಕಲ್ಯಾಣಿ ಸಂಗೀತ ನೀಡಿದರು.ಮಲ್ಲಯ್ಯ ಕಮತಗಿ,ಬಸವರಾಜ ಜಮದ್ರಖಾನಿ,ಬಸವರಾಜಪ್ಪ ನಿಷ್ಠಿ ದೇಶಮುಖ, ಶ್ರೀನಿವಾಸ ಜಾಲವಾದಿ, ಮಾಳಪ್ಪ ಕಿರದಳ್ಳಿ,ಸಿದ್ದಯ್ಯಸ್ವಾಮಿ ಸ್ಥಾವರಮಠ,ಅಹ್ಮದ ಪಠಾಣ,ಮೂರ್ತಿ ಬೊಮ್ಮನಹಳ್ಳಿ,ಮಲ್ಲಿಕಾರ್ಜುನ ಕಮತಗಿ,ಮಹಾಂತೇಶ ದೇವರಗೋನಾಲ,ರಾಘವೇಂದ್ರ ಹಾರಣಗೇರಾ,ಯಲ್ಲಪ್ಪ ಚಿನ್ನಾಕಾರ,ತಿಪ್ಪಣ್ಣ ಶೆಳ್ಳಿಗಿ,ನಿಂಗಣ್ಣ ಗೋನಾಲ ಉಪಸ್ಥಿತರಿದ್ದರು. ತಾಲೂಕಿನ ನೂರಾರು ಜನ ಭಾಗವಹಿಸಿ ನಾಟಕ ವೀಕ್ಷಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here