ಬಸವೇಶ್ವರ ಸಹಕಾರ ಸಂಘದ ಬೆಳ್ಳಿ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ: ಸಜ್ಜನ್

0
141

ಸುರಪುರ: ಬಸವೇಶ್ವರ ಪತ್ತಿನ ಸಹಕಾರ ಸಂಘವು ತನ್ನ ಇಪ್ಪತ್ತೈದನೆ ವರ್ಷಾಚರಣೆ ಅಂಗವಾಗಿ ಬೆಳ್ಳಿ ಹಬ್ಬ ಹಾಗು ಕಲ್ಯಾಣ ಮಂಟಪ ಬಳಿಯಲ್ಲಿ ಅಶ್ವಾರೂಢ ಬಸವೇಶ್ವರರ ಮೂರ್ತಿ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ೧೮ನೇ ತಾರೀಖು (ಶನಿವಾರ) ಬೆಳಿಗ್ಗೆ ಆರಂಭಗೊಳ್ಳಲಿದ್ದು,ತಾಲೂಕಿನ ಎಲ್ಲಾ ಜನತೆ ಭಾಗವಹಿಸುವಂತೆ ಸಹಕಾರ ಸಂಘದ ಅಧ್ಯಕ್ಷ ಸುರೇಶ ಸಜ್ಜನ್ ಮನವಿ ಮಾಡಿದರು.

ವೀರಶೈವ ಲಿಂಗಾಯತ ಕಲ್ಯಾಣ ಮಂಟಪ ಬಳಿಯ ಆವರಣದಲ್ಲಿ ನಡೆದ ಪೂರ್ವ ಸಿದ್ಧತೆ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಬಸವೇಶ್ವರ ಪತ್ತಿನ ಸಹಕಾರ ಸಂಘ,ತಾಲೂಕು ವೀರಶೈವ ಲಿಂಗಾಯತ ಸಮಿತಿ ಹಾಗು ವೀರಶೈವ ಲಿಂಗಾಯತ ಯುವ ವೇದಿಕೆ ಸಹಕಾರದಲ್ಲಿ ಅಧ್ಧೂರಿ ಕಾರ್ಯಕ್ರಮ ಜರುಗಲಿದ್ದು,ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಸಹಕಾರ ಧ್ವಜಾರೋಹಣದ ಮೂಲಕ ಚಾಲನೆ ದೊರೆಯಲಿದೆ.ಸಿದ್ದಸಿರಿ ಪತ್ತಿನ ಸಹಕಾರದ ಸಂಸ್ಥಾಪಕ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಹಾಗು ಶಹಾಪುರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ಕಲಬುರ್ಗಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ,ಯಾದಗಿರಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಹಾಗು ಗುರುಮಿಠಕಲ್ ಶಾಸಕ ನಾಗಣ್ಣಗೌಡ ಕಂದಕೂರ ಬಸವೇಶ್ವರ ಮೂರ್ತಿ ನಿರ್ಮಾಣದ ಅಡಿಗಲ್ಲು ನೆರವೇರಿಸಲಿದ್ದಾರೆ.ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಕಾಯಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು,ಯಾದಗಿರಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಹಾಗು ಸಹಕಾರ ಸಂಘದ ಬಸವಲಿಂಗಪ್ಪ ಪಾಟೀಲ ಅವರು ಕಕ್ಕೇರಾ ಶಾಖೆಯ ಕಟ್ಟಡದ ಅಡಿಗಲ್ಲು ನೆರವೇರಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಅನೇಕ ಜನ ಸ್ವಾಮೀಜಿಗಳು,ಸಹಕಾರ ಇಲಾಖೆಯ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಸ್ಥಳದಲ್ಲಿ ಬಸವೇಶ್ವರ ಸಹಕಾರ ಸಂಘದ ಷೇರುದಾರರಾಗುವರಿಗೆ ನೊಂದಣಿಗೆ ವ್ಯವಸ್ಥೆ ಮಾಡಲಾಗುತ್ತಿದ್ದು ಆಸಕ್ತರು ಸದಸ್ಯತ್ವ ಪಡೆಯಬಹುದು ಅಲ್ಲದೆ ಕಾರ್ಯಕ್ರಮದಲ್ಲಿ ವಿಶೇಷವಾದ ಸಂಕ್ರಾಂತಿ ವಿಶೇಷತೆಯ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಾಂತರಾಜ ಬಾರಿ,ನಿರ್ದೇಶಕರಾದ ವೀರಪ್ಪ ಆವಂಟಿ,ಮಂಜುನಾಥ ಗುಳಗಿ,ಯುವ ವೇದಿಕೆ ರಾಜ್ಯ ಉಪಾಧ್ಯಕ್ಷ ಮಂಜುನಾಥ ಜಾಲಹಳ್ಳಿ,ಸಿದ್ದಯ್ಯಸ್ವಾಮಿ ಕಡ್ಲೆಪ್ಪನವರ ಮಠ,ಸಂಗಣ್ಣ ಎಕ್ಕೆಳ್ಳಿ,ಬಸವರಾಜ ಬೂದಿಹಾಳ,ಪ್ರಕಾಶ ಅಂಗಡಿ,ರವಿಕುಮಾರಗೌಡ ಹೆಮನುರ, ಶಿವಕುಮಾರ ಸಜ್ಜನಶೆಟ್ಟಿ,ಚಂದ್ರಶೇಖರ ಡೊಣೂರ,ಪ್ರದೀಪ ಕದರಾಪುರ,ಸತೀಶ ಬಾರಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here