ವಿವಿಧ ರಂಗದ ಸಾಧಕರಿಗೆ ‘ಬಸವಾಮೃತ’ ಪ್ರಶಸ್ತಿ ಪ್ರದಾನ, ಫೆ.೨ ರಂದು

0
61

ಕಲಬುರಗಿ: ಜಾನಪದ ತಜ್ಞ-ಹಿರಿಯ ನಾಟಕಕಾರ ಲಿಂಗೈಕ್ಯ ಶ್ರೀ ಅಮೃತೇಶ ಮಾಸ್ತರ್ ಕಲಶೆಟ್ಟಿ ಸ್ಮರಣಾರ್ಥ ಇಲ್ಲಿನ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯ್ಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದವರನ್ನು ಗುರುತಿಸಿ ಕೊಡಮಾಡುವ ‘ಬಸವಾಮೃತ’ ಪ್ರಶಸ್ತಿ ಪ್ರದಾನ ಸಮಾರಂಭ, ಈ ಬಾರಿ ಫೆ.೨ ರಂದು ಬೆಳಗ್ಗೆ ೧೦.೪೫ ಕ್ಕೆ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ಕಲಾ ಮಂಡಳದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷರೂ ಆದ ನ್ಯಾಯವಾದಿ ಹಣಮಂತರಾಯ ಅಟ್ಟೂರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಅನೇಕ ದಶಕಗಳಿಂದ ಸಾಹಿತ್ಯ, ನಾಟಕ, ಪ್ರವಚನ, ಹಾಸ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಈ ಭಾಗದ ಜನರಿಂದ ಸೈ ಎನಿಸಿಕೊಂಡಿರುವ ಅದ್ಭುತ ಕಲಾವಿದ ಅಮೃತೇಶ ಮಾಸ್ತರ್ ಕಲಶೆಟ್ಟಿ ಅವರಾಗಿದ್ದರು. ಅವರ ಕಲಾ ಬದುಕು ಮತ್ತು ಬರಹವನ್ನು ಇಂದಿನ ಯುವ ಜನತೆಗೆ ತಿಳಿಸುವ ಉದ್ದೇಶದೊಂದಿಗೆ ಮತ್ತು ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯ ಸಂಘ ನಿರಂತರವಾಗಿ ಮಾಡುತ್ತಾ ಬರುತ್ತಿದೆ ಎಂದು ಅವರು ವಿವರಿಸಿದರು.

Contact Your\'s Advertisement; 9902492681

ಶ್ರೀನಿವಾಸ ಸರಡಗಿಯ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭದಲ್ಲಿ ಮಾಜಿ ಸಚಿವ ಎಸ್.ಕೆ.ಕಾಂತಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಾಸ್ಯ ಕಲಾವಿದ ಗುಂಡಣ್ಣಾ ಡಿಗ್ಗಿ ಹರಸೂರ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಎಸ್.ಗುಬ್ಬಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಜನಪರ ಹೋರಾಟಗಾರ ಪ್ರಭುದೇವ ಯಳಸಂಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪ್ರಶಸ್ತಿಗೆ ತಳವಾಡೆ, ಅಷ್ಟಗಿಕರ್, ಹಾರಕೂಡ ಸೇರಿ ಆರು ಜನ ಆಯ್ಕೆ: ತಮ್ಮ ವೃತ್ತಿಯಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಎಸ್.ಪಿ. ವೀರಭದ್ರಪ್ಪಾ ತಳವಾಡೆ, ಹಾಸ್ಯ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಖ್ಯಾತ ಹಾಸ್ಯ ಕಲಾವಿದ ಹೇಮಂತ ಅಷ್ಟಗಿಕರ್, ಸಂಗೀತ ಕಲಾವಿದ ಬೀದರ ಜಿಲ್ಲೆಯ ಅಣ್ಣಾರಾಯ ಹಾರಕೂಡ, ಖ್ಯಾತ ಪ್ರವಚನಕಾರ ಸಂಗಮೇಶ ಶಾಸ್ತ್ರಿ ಮಾಶಾಳ, ರಂಗ ಕಲಾವಿದ ಯಾದಗೀರ ಜಿಲ್ಲೆಯ ಶಂಕರಲಿಂಗ ನಿಂಬರಗಿ, ಕೃಷಿ ಕ್ಷೇತ್ರದ ಸಾಧಕ ಲಕ್ಷ್ಮೀಕಾಂತ ಟೆಂಗಳಿ ಉಪಳಾಂವ ಅವರನ್ನು ಅಯ್ಕೆ ಮಾಡಲಾಗಿದೆ ಎಂದು ಅಟ್ಟೂರ ವಿವರಣೆ ನೀಡಿದರು.

ಸಂಘದ ಪ್ರಮುಖರಾದ ನಂದೀಶ್ವರ ಜೆ.ಪಾಟೀಲ, ಮಲ್ಕಾರಿ ಪೂಜಾರಿ, ರವಿಕುಮಾರ ಶಹಾಪುರಕರ್, ದೇವೇಂದ್ರ ಕಣ್ಣಿ, ಶ್ರವಣಕುಮಾರ ಮಠ, ರಘುನಂದನ್ ಕುಲಕರ್ಣಿ, ಶರಣಬಸಪ್ಪ ಪಾಟೀಲ ಬೆಳಗುಂಪಿ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here