ಶುಶ್ರೂಷಕರ ವತಿಯಿಂದ ಮ್ಯಾರಥಾನ್ ಓಟ

0
19

ಕಲಬುರಗಿ: ನಗರದ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಿಂದ ಜಗತ್ತು ವೃತ್ತದವರೆಗೆ ೨೦೨೦ನೇ ವರ್ಷದ ನೈಟಿಂಗೇಲ್ ಜನ್ಮದಿನವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವ ಪ್ರಯುಕ್ತ ಎಲ್ಲಾ ನಸಿಂಗ್ ವಿದ್ಯಾರ್ಥಿಗಳು ಮತ್ತು ಶುಶ್ರೂಷಕರು ಇಂದು ನಡೆದ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ಅತ್ಯುತ್ತಮ ಸೇವೆಗೈದ  ಶುಶ್ರೂಷಕರಿಗೆ ಒಂದು ಗೌರವವನ್ನು ಸಲ್ಲಿಸುವ ಪ್ರಯುಕ್ತ ಈ ಮ್ಯಾರಥಾನ್ ಓಟಕ್ಕೆ  ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಪ್ರಸನ್ನಕುಮಾರ್ ದೇಸಾಯಿ ಅವರು ಉದ್ಘಾಟಿಸಿದರು.

ಎಲ್ಲಾ ನಸಿಂಗ್ ವಿದ್ಯಾರ್ಥಿಗಳಿಗೆ ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರುಗಳಿಗೆ ಹಮ್ಮಿಕೊಳ್ಳಲಾಗಿತ್ತು ಇದರಲ್ಲಿ  ಸುಮಾರು ೨೦೦ಕ್ಕೂ ಹೆಚ್ಚು ಶುಶ್ರೂಷಕರು ಮತ್ತು ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು

Contact Your\'s Advertisement; 9902492681

ರಾಜ್ಯ ಟಿಎಎನ್‌ಐ ಉಪಾಧ್ಯಕ್ಷ ಶ್ರೀಕಾಂತ್ ಪುಲಾರಿ, ಸರಕಾರಿ ಶುಶ್ರೂಷಾ ನೌಕರರ ಸಂಘದ ಅಧ್ಯಕ್ಷ ಮಡಿವಾಳಪ್ಪ ನಾಗರಹಳ್ಳಿ,  ವಸಂತ ನಸಿಂಗ್ ಕಾಲೇಜಿನ ಚೇರ್ಮನ್ ಚಂದ್ರಕಾಂತ ಗದ್ದಗಿ, ಚಿನ್ನಮ್ಮ ಗದ್ದಗಿ, ಡಾ.ಪ್ರೀಯಾ ಗದ್ದಗಿ, ಬಾ.ವಿಜಯಕುಮಾರ, ಕಾಲೇಜಿನ ಮುಖ್ಯಸ್ಥ ಡಾಕ್ಟರ್ ಕಿರಣ್ ಎಚ್.ಕೆ.ಇ, ಸಂಸ್ಥೆಯ ಪ್ರಾಂಶುಪಾಲರಾದ ಪೂರ್ಣಿಮಾ ಕೋರವಾರ, ಗುಲ್ಬರ್ಗಾ ಸಿಟಿ ನಸಿಂಗ್ ಸಂಸ್ಥೆಯ ಕಾಲೇಜಿನ ಪ್ರಾಂಶುಪಾಲ ಝೋಹೇಬ್ ಹುಸೇನ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here