ಕನ್ನಡ ಸಾಹಿತ್ಯ ಸಮ್ಮೇಳನ: ಮಹಿಳೆಯರಿಂದ ಬೈಕ್ ರ್ಯಲಿ

0
88
ಕಲಬುರಗಿ: ಫೆ. ೫, ೬ ಮತ್ತು ೭ರಂದು  ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲಾ ಕಸಾಪ ಮಹಿಳಾ ಪದಾಧಿಕಾರಿಗಳಾದ ಸುಜಾತಾ ಬಂಡೇಶರೆಡ್ಡಿ ನೇತೃತ್ವದಲ್ಲಿ ಇಂದು ಬೈಕ್ ರ್ಯಾಲಿ ನಡೆಸಿದರು.

ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ರ್ಯಾಲಿಗೆ ಚಾಲನೆ ನೀಡಿದರು. ಕಾರ್ಯದರ್ಶಿ ಮಡಿವಾಳಪ್ಪ ನಾಗರಳ್ಳಿ, ಖಜಾಂಚಿ ದೌಲತರಾಯ ಮಾಲಿ ಪಾಟೀಲ, ಯಾದಗಿರಿ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಇತರರು ಇದ್ದರು.
ನಗರದ ಕನ್ನಡ ಭವನದಿಂದ ಹೊರಟ ಮಹಿಳ ಬೈಕ್ ರ್ಯಾಲಿ ಸರ್ದಾರ್ ವಲ್ಲಭಭಾಯ್ ಪಟೇಲ್  ವೃತ್ತದ ಮೂಲಕ ಜಗತ್ ವೃತ್ತ ಹಾದು ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳಿ ರಾಷ್ಟಪತಿ ವೃತ್ತ ದ ಮೂಲಕ ಕನ್ನಡ ಭವನ ತಲುಪಿದರು.
ಭಾರತಿ ರೇಷ್ಮೇ, ರೇಣುಕಾ ಢಾಂಗೆ, ಸವಿತಾ ನಾಸಿ, ಡಾ. ಗೀತಾ ಪಾಟೀಲ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here