3 ರಂದು ಪೌರತ್ವ ಕಾಯ್ದೆ ರದ್ದತಿಗೆ ಒತ್ತಾಯಿಸಿ ಯುವಕರಿಂದ ಹೆದ್ದಾರಿ ತಡೆದು ಪ್ರತಿಭಟನೆ

0
82
  • ಶಪೀಕ್ ಊಡಗಿ

ಸೇಡಂ: ತಾಲೂಕಿನ ಮಳಖೇಡ ಗ್ರಾಮದಲ್ಲಿ  ಸಿಎಎ, ಎನ್.ಆರ್.ಸಿ, ಎನ್.ಪಿ.ಆರ್, ಪೌರತ್ವ ಕಾಯ್ದೆ ರದ್ದತಿಗಾಗಿ  ಸೋಮವಾರ 3 ರಂದು ಬೆಳಗ್ಗೆ 11 ಗಂಟೆಗೆ ಪೀಪಲ್ಸ್ ಫೋರಂ ಹಾಗೂ ಮಳಖೇಡ ಗ್ರಾಮದ ಯುವಕರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಹೆದ್ದಾರಿ ತಡೆದು ಶಾಂತಿಯುತವಾಗಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಉಮಾರ್ ಖಾನ್, ಪ್ರಶಾಂತ ದೋಡಮನಿ, ಬಸಿರ್ ಅಹ್ಮಿದ್,ಶ್ರೀಧಾರ ಸತೀಶ್ ನಂದುರ್ , ಮೋಸಿನ್ ಅಹಮ್ಮಿದ್  ತಿಳಿಸಿದ್ದಾರೆ.

ಶಾಹಿನ್ ಬಾಗ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ, ಜಾಮಿಯಾ ಮತ್ತು ಶಾಹಿನ್ ಬಾಗ ಹೋರಾಟಗಾರರ ಮೇಲೆ ಕೋಮುವಾದಿ ಶಂಕಿತ ಉಗ್ರರ ಕೃತ್ಯ ಖಂಡಿಸಿ ಆರೋಪಿಗಳ ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಸಡೆಸಲಾಗುವುದೆಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here