ಸಮ್ಮೇಳನ ಯಶಸ್ವಿಗೊಳಿಸಲು ಹರ್ಷಾನಂದ ಗುತ್ತೇದಾರ ಮನವಿ

0
151

ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಕಲಬುರಗಿ ಮಹಾನಗರದಲ್ಲಿ ಫೆ. ೫,೬ ಮತ್ತು ೭ ರಂದು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಜನತೆ ಭಾಗವಹಿಸಿ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ಜಿ.ಪಂ ಸದಸ್ಯ ಮತ್ತು ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮಿತಿ ಸದಸ್ಯ ಹರ್ಷಾನಂದ ಗುತ್ತೇದಾರ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸಾಮಾಜಿಕವಾಗಿ, ಸಾಹಿತ್ತಿಕವಾಗಿ, ಭೌಗೋಳಿಕವಾಗಿ ತನ್ನದೇ ಪರಂಪರೆ ಹೊಂದಿರುವ ಈ ಭಾಗ ಹಲವು ಪ್ರಥಮಗಳನ್ನು ನಾಡಿಗೆ ನೀಡಿದೆ. ಸುದೀರ್ಘ ೩೨ ವರ್ಷಗಳ ನಂತರ ನಡೆಯುತ್ತಿರುವ ಅಕ್ಷರ ಜಾತ್ರೆ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕ. ಉತ್ತರ ಮತ್ತು ದಕ್ಷಿಣದ ಮಧ್ಯೆ ಕೊಂಡಿಯಾಗಿ ನಾಡಿನ ಜನರ ಮಧ್ಯೆ ಸಂಬಂಧ ಬೆಸೆಯುವ ಈ ಐತಿಹಾಸಿಕ ಕಾರ್ಯಕ್ರಮವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸೋಣ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಯವರು ಮಾತ್ರ ನೋಡಲು ಮತ್ತು ಭಾಗವಹಿಸಲು ಸಾಧ್ಯವಿರುವ ಸಮ್ಮೇಳನದಲ್ಲಿ ಭಾಗಿಯಾಗಿ ಅಕ್ಷರ ಜಾತ್ರೆಯನ್ನು ಸಂಘಟಿಸೋಣ. ನಮ್ಮ ಕಲ್ಯಾಣ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ, ಜನಪದ, ಜೀವನ ವಿಧಾನವನ್ನು ಅಖಂಡ ಕರ್ನಾಟಕಕ್ಕೆ ತಿಳಿಸುವ ಕಾರ್ಯದಲ್ಲಿ ಕೈಜೋಡಿಸಿ ಅದರ ಯಶಸ್ಸಿಗೆ ಶ್ರಮಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here