ತಿಮ್ಮಾಪುರದಗುಮ್ಮಾನವರಗೃಹದಲ್ಲಿ ಶರಣರ ಸದ್ಭಾವ ಚಿಂತನ ಕಾರ್ಯಕ್ರಮ .

0
38

ಸುರಪುರ: ನಗರದ ತಿಮ್ಮಾಪುರ ರಂಗಂಪೇಟೆಯ ಗುಮ್ಮಾನವರ ಗೃಹದಲ್ಲಿ ಗುಮ್ಮಾಣವರ ಮನೆತನದ ಆರಾಧ್ಯದೈವ ಕಲಬುರ್ಗಿಯ ಶರಣಬಸವೇಶ್ವರ ಜ್ಞಾನದಾಸೋಹದ ಸಲುವಾಗಿ ೧೫ ನೇ ವರ್ಷದ ಶರಣರ ಸಂತರ ಸದ್ಭಾವನಾ ಚಿಂತನೆ ಕಾರ್ಯಕ್ರಮವನ್ನು ಇಂದು(ಗುರುವಾರ) ಹಮ್ಮಿಕೊಳ್ಳಲಾಗಿದೆ.

ಇಂದು ಸಾಯಂಕಾಲ ೭ ಗಂಟೆಗೆದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯವಹಿಸುವರು.ರುಕ್ಮಾಪುರದ ಹಿರೇಮಠ ಸಂಸ್ಥಾನದಗುರುಶಾಂತಮೂರ್ತಿ ಶಿವಾಚಾರ್ಯ ಉಧ್ಘಾಟಿಸುವರು. ಶುಕ್ರವಾರ (ಫೆ.೧೪)ಸಂಜೆ ೭ ಗಂಟೆಗೆಗದಗಿನಗಜೇಂದ್ರಗಡದಕಾಲಾಜ್ಞಾನ ಮಠದ ಶರಣಬಸವ ಸ್ವಾಮಿಗಳು ಸಾನಿಧ್ಯ ವಹಿಸುವರು.

Contact Your\'s Advertisement; 9902492681

ಶನಿವಾರ (ಫೆ.೧೫) ಸಾಯಂಕಾಲ ೭ ಗಂಟೆಗೆ ಸುರಪುರ ನಗರದಕಡ್ಲಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಭಾನುವಾರ (ಫೆ.೧೬) ಸಾಯಂಕಾಲ ೭ ಗಂಟೆಗೆ ಮಳಖೇಡದ ಹಜರಥ್ ಸೈಯದ್ ಶಹಾ ಮುಸ್ತಾಫಾಖಾದ್ರಿ ಸಾನಿಧ್ಯವಹಿಸುವರು. ಸೋಮವಾರ (ಫೆ.೧೭) ಸಾಯಂಕಾಲ ೭ ಗಂಟೆಗೆಯಾದಗಿರಿಯ ದಾಸಬಾಳ ವೀರೇಶ್ವರ ಮಠದ ವೀರೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸುವರು.ಮಂಗಳವಾರ (ಫೆ.೧೮) ಸಾಯಂಕಾಲ ೭ ಗಂಟೆಗೆ ಲಕ್ಷ್ಮೀಪುರದ ಶ್ರೀಗಿರಿ ಸಂಸ್ಥಾನ ಮಠದಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಪ್ರವಚನ ನೀಡುವರು.ಬುಧವಾರ (ಫೆ.೧೯) ಸಾಯಂಕಾಲ ೭ ಗಂಟೆಗೆ ಮಹಿಳೆಯರ ಜೀವನ ಶೈಲಿ ಕುರಿತುಯಾದಗಿರಿಯಜ್ಯೋತಿ ಲತಾತಡಿಬಿಡಿ ಮಠಉಪನ್ಯಾಸ ನೀಡುವರು.ಗುರುವಾರ (ಫೆ.೨೦) ಸಾಯಂಕಾಲ ೭ ಗಂಟೆಗೆಜೇವರ್ಗಿಯ ಬ್ರಹನ್ಮಠ ಮಾಗಣಗೇರಿಯಡಾ.ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸುವರುಹಾಗೂ ಶಹಾಪುರದಏಕದಂಡಗಿ ಮಠದ ಕಾಳಾ ಹಸ್ತೇಂದ್ರ ಮಹಾಸ್ವಾಮಿಗಳು ಉಪದೇಶ ನೀಡುವರು.ಶುಕ್ರವಾರ (ಫೆ.೨೧) ಸಾಯಂಕಾಲ ೭ ಗಂಟೆಗೆದೇವಾಪುರದ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸುವರು.

ಶನಿವಾರ (ಫೆ.೨೨) ಸಾಯಂಕಾಲ ೭ ಗಂಟೆಗೆ ಲಕ್ಷ್ಮೀಪುರದ ಶ್ರೀಗಿರಿ ಸಂಸ್ಥಾನದಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನಿಧ್ಯ ವಹಿಸುವರು ಹಾಗೂ ಹಿಂಡಿತಾಲೂಕಿನತದ್ದೆವಾಡಿಗ್ರಾಮದ ಮಹಾಂತೇಶ ಸ್ವಾಮಿ ಹಿರೇಮಠಅವರುಉಪದೇಶ ನೀಡುವರು.ಈ ಎಲ್ಲಾ ಕಾರ್ಯಕ್ರಮಗಳಿಗೆ ಯಲಬುರ್ಗಾತಾಲೂಕಿನಗುರು ಮಠದ ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯಂದರಾದ ರಾಚಯ್ಯ ಸ್ವಾಮಿಗಳು ಪುರಾಣಿಕರಾಗಿಆಗಮಿಸಲಿದ್ದುಅಪ್ಪಾಸಾಬ್ ನದಾಫ್‌ಅವರುತಬಲಾ ವಾದನ ಮಾಡಲಿದ್ದಾರೆಎಂದುಕಾರ್ಯಕ್ರಮಆಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here