54 ವಾರ್ಡ್‌ಲ್ಲಿ ವಿವಿಧ ಕಾಮಗಾರಿಗೆ ಶಾಸಕ ಪಾಟೀಲ್ ಚಾಲನೆ

0
48

ಕಲಬುರಗಿ: ವಾರ್ಡ್ ನಂ.೫೪ ರ ಅಂಬಿಕಾ ನಗರ, ದೇವಾನಗರ, ಬನಶಂಕರಿ ನಗರದಲ್ಲಿ ಎಸ್‌ಸಿಪಿ, ಎಸ್‌ಟಿಪಿ ಅನುದಾನದ ಅಡಿಯಲ್ಲಿ ರೂ.೪.೮೭ ಕೋಟಿ ವೆಚ್ಚದ ಸಿ.ಸಿರಸ್ತೆ, ಚರಂಡಿ, ಹಾಗೂ ಉದ್ಯಾನವನ ಮತ್ತು ವಿವಿಧ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಬುಧವಾರ ಚಾಲನೆ ನೀಡಿದರು.

ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಎಸ್‌ಸಿಪಿ ಅನುದಾನದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ನೀಡಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅಲ್ಲದೆ ವಾಹನ ಸವಾರರಿಗೂ ಅನುಕೂಲವಾಗಲಿದೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಶಿವು ಸ್ವಾಮಿ, ರಾಜು ವಾಡೆಕರ, ಪ್ರಭು ಹಾದಿಮನಿ, ವಿಶ್ವನಾಥ್ ಸಾಲಿಮಠ, ಬಡಾವಣೆಯ ಮುಖಂಡರಾದ ಜಿ.ಕೆ ಶಿವಾಜಿ, ನಾರಾಯಣರಾವ್ ದೇವಮನಿ, ಪ್ರೇಮ್ ಸಿಂಗ್ ರಾಠೋಡ್, ನಾಗಪ್ಪ ಝಳಕಿ, ಶಂಕರ ಮಮಲಗಿ, ಬಸವ ತಳವಾರ, ಶಿವರಾಮ ನಾಯಕ, ಭೀಮಶಾ ಕಟ್ಟಿಮನಿ, ಹಣಮಂತ್ರಾಯ, ಮಮ್ಮದ್ ಸಜ್ಜಾದ್ ಖಾನ್, ಮೊಮ್ಮದ್ ಅಜಿಮ್, ಇಂಜಿನಿಯರರಾದ ಕಾಳಪ್ಪ, ನಾರಾಯಣರಾವ, ಗುತ್ತಿಗೆದಾರರಾದ ಅಜಿಂ ಸಗರಿ, ಹಾಗೂ ಸಿರಾಜುದ್ದೀನ್ ಪಟೇಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here