ಆಟಗಳಿಂದ ಮಾನಸಿಕ ಮತ್ತು ದೈಹಿಕ ಸದೃಢತೆ: ಡಾ. ನೀಲಾಂಬಿಕಾ ಶೇರಿಕಾರ

0
94

ಕಲಬುರಗಿ: ಆಟ ಆಡುವುದರಿಂದ ಮಾನಸಿಕ ಮತ್ತು ದೈಹಿಕ ಸದೃಢತೆಯಾಗುತ್ತದೆ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನೀಲಾಂಬಿಕಾ ಶೇರಿಕಾರ ಅಭಿಪ್ರಾಯಪಟ್ಟರು.

ಪೂಜ್ಯ ಗೋದುತಾಯಿ ಅವ್ವಾಜೀಯವರ ೪೯ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಏಳು ದಿನಗಳ ಕಾರ್ಯಕ್ರಮದಲ್ಲಿ ಗುರುವಾರ ಕಲ್ಯಾಣ ಕರ್ನಾಟಕದ ಗ್ರಾಮೀಣ ಕ್ರೀಡೆಗಳು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಗ್ರಾಮೀಣ ಕ್ರೀಡೆಗಳು ಇಂದಿನ ದಿನಗಳಲ್ಲಿ ನಶಿಸಿ ಹೋಗುತ್ತಿವೆ. ಗ್ರಾಮೀಣ ಜನತೆಯಲ್ಲಿ ಮಾತ್ರ ಇನ್ನೂ ಸ್ವಲ್ಪ ಉಳಿದಿದ್ದು, ನಗರ ಪ್ರದೇಶಗಳಲ್ಲಿಯ ಜನತೆಗೆ ಅದರ ಬಗ್ಗೆ ಜ್ಞಾನವಿಲ್ಲ ಎಂದರು.

Contact Your\'s Advertisement; 9902492681

ಇಂದಿನ ದಿನಗಳಲ್ಲಿ ಕೇವಲ ಮೋಬೈಲ್ ನಲ್ಲಿ ಕಾಲ ಕಳೆಯುತ್ತಿರುವುದರಿಂದ ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದಕ್ಕಾಗಿ ಮೊಬೈಲ್‌ನಲ್ಲಿ ಸಮಯ ವ್ಯರ್ಥ ಮಾಡದೇ ದೈಹಿಕವಾಗಿ ಆಟಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಸಶಕ್ತರಾಗುತ್ತಾರೆ. ಓದುವುದರ ಜತೆಗೆ ಆಟಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ. ಮೊದಲಿನವರು ಹಿಂದಿನ ಕಾಲದಲ್ಲಿ ಆಟಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರಿಂದ ಅವರೆಲ್ಲ ಬಹಳ ಶಕ್ತಿಶಾಲಿಗಳಾಗಿರುತ್ತಿದ್ದರು ತಿಳಿಸಿದರು.

ಇಂತಹ ಆಟಗಳಲ್ಲಿ ಭಾಗವಹಿಸಿದ್ದು ಬಹಳ ಸಂತೋಷ ನೀಡಿದೆ. ಈ ರೀತಿಯಾದ ಆಟಗಳು ನಗರ ಪ್ರದೇಶಗಳಲ್ಲಿ ಆಡಲು ಸಿಗುವುದಿಲ್ಲ ಮತ್ತು ಯಾರೂ ಭಾಗವಹಿಸುವುದಿಲ್ಲ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ
– ಕು. ಅನುಷಾ , ವಿದ್ಯಾರ್ಥಿನಿ, ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯ, ಕಲಬುರಗಿ
ಈ ಆಟಗಳು ಇನ್ನೂ ಹಳ್ಳಿಗಳಲ್ಲಿ ಆಡಲು ಸಿಗುತ್ತವೆ, ಆದರೆ ಸಿಟಿಯಲ್ಲಿ ಬಹಳ ಜನರಿಗೆ ಗೊತ್ತೆ ಇಲ್ಲ. ಮಹಾವಿದ್ಯಾಲಯ ಇಂತಹ ಆಟಗಳ ಸ್ಪರ್ಧೆ ಏರ್ಪಡಿಸಿರುವುದು ಬಹಳ ಸಂತೋಷವಾಗಿದೆ.
– ಕು.ಸಿದ್ದಮ್ಮ, ವಿದ್ಯಾರ್ಥಿನಿ, ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆ, ಚಿತ್ತಾಪೂರ

ಕಾರ್ಯಕ್ರಮದಲ್ಲಿ ಚಿತ್ತಾಪೂರಿನ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಅಮರೇಶ್ವರಿ ಬಾಬುರಾವ ಚಿಂಚನಸ್ಸೂರ ಮುಖ್ಯ ಅತಿಥಿಗಳಾಗಿದ್ದರು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕಿ ಡಾ. ಇಂದಿರಾ ಶೇಟಕಾರ ಮಾತನಾಡಿ, ಇಂದಿನ ಒತ್ತಡ ಜೀವನದಲ್ಲಿ ಆಟಗಳಲ್ಲಿ ಮಕ್ಕಳು ಭಾಗಿಯಾಗುವುದು ಅವಶ್ಯಕವಾಗಿದೆ. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂತಹ ಆಟಗಳಲ್ಲಿ ಭಾಗಿಯಾಗಿರುವುದು ಬಾಲ್ಯದಲ್ಲಿ ಆಡುವ ಆಟಗಳನ್ನು ನೆನಪಿಸುವಂತಾಯಿತು ಎಂದರು.

ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಶಾಂತಲಾ ನಿಷ್ಠಿ, ದೈಹಿಕ ವಿಭಾಗದ ನಿರ್ದೇಶಕಿ ಶ್ರೀಮತಿ ಜಾನಕಿ ಹೊಸುರ ವೇದಿಕೆಯಲ್ಲಿದ್ದರು. ಕೃಪಾಸಾಗರ ಗೊಬ್ಬುರ ಸ್ವಾಗತ ಮತ್ತು ಅತಿಥಿ ಪರಿಚಯ ಮಾಡಿಸಿದರು. ಶ್ರೀಮತಿ ಜಾನಕಿ ಹೊಸೂರ್ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿ ಅನಿತಾ ಕೃಪಾಸಾಗರ ಗೊಬ್ಬುರ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಡಾ.ಸಿದ್ದಮ್ಮ ಗುಡೇದ, ಡಾ.ಸೀಮಾ ಪಾಟೀಲ್, ಶ್ರೀಮತಿ ಸಾವಿತ್ರಿ ಜಂಬಲದಿನ್ನಿ, ಡಾ.ಪುಟ್ಟಮಣಿ ದೇವಿದಾಸ, ಡಾ.ಎನ್.ಎಸ್.ಹೂಗಾರ, ರೇವಯ್ಯ ವಸ್ತ್ರದಮಠ, ಡಾ.ಸಂಗೀತಾ ಪಾಟೀಲ, ಶ್ರೀಮತಿ ಪದ್ಮಜಾ ವೀರಶೆಟ್ಟಿ, ಶ್ರೀಮತಿ ದಿಶಾ ಮೆಹತಾ, ಶ್ರೀಮತಿ ವಿದ್ಯಾ ರೇಷ್ಮಿ, ಶ್ರೀಮತಿ ಅನುಸೂಯ ಬಡಿಗೇರ, ಶ್ರೀಮತಿ ಶಶೀಕಲಾ ಪಾರಾ, ಶ್ರೀಮತಿ ಪ್ರಭಾವತಿ ಹೆಚ್. ವಿನೋದ ಹಲಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಹೇಬ ಬಿರಾದಾರ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗ್ರಾಮಾಂತರ ಕ್ರೀಡೆಗಳಾದ ಚಕಾರವಚ್ಚಿ, ಕುಂಟಲಿಪ್ಪಿ, ಭಾವಿ-ದಡ, ಬಳಿಚೂರಾಟ, ಸ್ಕೀಪ್ಪಿಂಗ್, ಗೋಣಿಚೀಲದಾಟ, ಚಮಚದ ಮೇಲೆ ನಿಂಬೆಹಣ್ಣು ಇಟ್ಟುಕೊಂಡು ನಡೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಡುವುದು ಇನ್ನಿತರ ಸ್ಪರ್ಧೆಗಳಲ್ಲಿ ಕಲಬುರಗಿ ನಗರ ಮತ್ತು ಜಿಲ್ಲೆಯ ವಿವಿಧ ತಾಲೂಕಿನಿಂದ ನೂರಾರು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅಲ್ಲದೆ ಮಹಾವಿದ್ಯಾಲಯದ ಪ್ರಾಚಾರ್ಯರು, ಉಪನ್ಯಾಸಕರು ಸಹ ಈ ಆಟಗಳಲ್ಲಿ ಭಾಗವಹಿಸಿ ತಮ್ಮ ಬಾಲ್ಯದ ಆಟಗಳನ್ನು ನೆನಪಿಸಿಕೊಂಡು ಸಂತಸಪಟ್ಟರು.

ಆಟಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೋದುತಾಯಿ ಬಿ.ಎಡ್ ವಿದ್ಯಾರ್ಥಿನಿಯರು ಸಮಗ್ರ ಪ್ರಶಸ್ತಿಗೆ ಭಾಜನರಾದರು. ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ರನ್ನರ್‌ಅಫ್ ಪ್ರಶಸ್ತಿ ಪಡೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here