ದಲಿತ ಯುವ ಕವಿ ಉತ್ತಮ ದೊಡ್ಮನಿ ಅವರ ಒಡಲಾಳದ ಧ್ವನಿ ಕವನ ಸಂಕಲನ ಬಿಡುಗಡೆ

0
81

ಚಿಂಚೋಳಿ: ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸ್ಥಳೀಯ ಬುದ್ದಾಂಕುರ ಪ್ರಕಾಶನ ದಲಿತ ಯುವ ಕವಿ ಉತ್ತಮ ದೊಡ್ಮನಿ ಅವರ ಒಡಲಾಳದ ಧ್ವನಿ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಜರಗಿತು.

ಕನ್ನಡದ ಹೆಸರಾಂತ ಕಥೆಗಾರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ರಾದ ಕುಂ.ವೀರಭದ್ರಪ್ಪ ಅವರು ಕವನ ಸಂಕಲನ ಬಿಡುಗಡೆ ಮಾಡಿದರು. ಕವಿ ರಾಜಶೇಖರ ಮಾಂಗ  ಪುಸ್ತಕ ಪರಿಚಯ ಮಾಡಿಕೊಟ್ಟರು. ವೇದಿಕೆಯಲ್ಲಿ ಸಾಹಿತಿ ಡಾ ಗವಿಸಿದ್ದಪ್ಪ ಪಾಟೀಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಲಾಮೂರ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ ರೇಕುಳಗಿ, ಬುಧ್ಧ ವಿಹಾರದ ಬಂತೆ ಧಮ್ಮದೀಪ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here