ಶರಣರ ತಾಕತ್ತು ಬೆಳೆಸಿಕೊಳ್ಳಲು ಅಕ್ಕ ಅನ್ನಪೂರ್ಣ ತಾಯಿ ಕರೆ

1
275

ಕಲಬುರಗಿ: ಪಾದಕ್ಕೆ‌ ಪರುಷ ಸ್ಥಾನ ಕಲ್ಪಿಸಿದ ಬಸವಣ್ಣನವರು ವೇದ, ಉಪನಿಷತ್, ಶಾಸ್ತ್ರಗಳನ್ನು ದಿಕ್ಕರಿಸಿದ ಅವರು ಮನಸಾಕ್ಷಿ ಅನುಗುಣವಾಗಿ ಬದುಕಲು ಕಲಿಸಿದರು ಎಂದು ಬೀದರ್ ನ ಬಸವ ಗಿರಿಯ ಅಕ್ಕ ಅನ್ನಪೂರ್ಣ ತಾಯಿ ನುಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಬಸವ ಸಾಂಸ್ಕೃತಿಕ ಉದ್ಯಾನದ ಆವರಣದಲ್ಲಿ ಆಯೋಜಿಸಿರುವ ಬಸವ ಜಯಂತಿ ಉತ್ಸವ ಕಾರ್ಯಕ್ರಮ ದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಬಸವಣ್ಣನವರು ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಕಲಿಸಿದರು. ದೇಹವನ್ನೇ ದೇವಾಲಯ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ದೇವರ ಬಗೆಗಿರುವ ಭಯ ನಿವಾರಿಸಿದರು. ಕಾಯಕ ಜೀವಿಗಳು ಆಗಿದ್ದ ಶರಣರ ಆಚಾರ- ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ವಚನ ಓದುವ, ಲಿಂಗಪೂಜೆಯಲ್ಲಿ ತೊಡಗುವ, ಕಾಯಕ ಮಾಡುವ, ದುಡಿದುಣ್ಣುವ ಮೂಲಕ ಪಂಚಾಂಗ, ಭವಿಷ್ಯಕಾರರಿಂದ ದೂರವಿರಬೇಕು. ಶರಣರ ತಾಕತ್ತು ನಮ್ಮಲ್ಲಿ ಬರಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮೆಹರಾಜ್ ಪಟೇಲ್ ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here