ವಸತಿ ನಿಲಯದಲ್ಲಿ ಎಸ್‌ಎಸ್‌ಎಸ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಾರ್ಯಾಗಾರ

0
67

ಶಹಾಬಾದ: ಎಸ್‌ಎಸ್‌ಎಸ್‌ಸಿ ವಿದ್ಯಾರ್ಥಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆ ಬರೆಯುವ ಮೂಲಕ ಉತ್ತಮ ಅಂಕಗಳಿಸಬೇಕು ಎಂದು ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಗಿರೀಶ ರಂಜೋಳಕರ್ ಹೇಳಿದರು.

ಅವರು ನಗರದ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಎಸ್‌ಎಸ್‌ಎಸ್‌ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಿಶೇಷ ಪರೀಕ್ಷಾ ಕಾರ್ಯಾಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪಾಠವನ್ನು ಮನನ ಮಾಡಿಕೊಂಡು ಅಭ್ಯಾಸ ಮಾಡಬೇಕು.ರಾತ್ರಿಯಿಡಿ ನಿದ್ರೆಗೆಟ್ಟು ಓದಬಾರದು. ಈ ಸಮಯದಲ್ಲಿ ಹೊರಗಡೆ ಕರಿದ ಯಾವುದೇ ತಿಂಡಿಗಳನ್ನು ತಿನ್ನಬಾರದು. ಇದರಿಂದ ದೇಹದ ಆರೋಗ್ಯ ಹದಗೆಡುತ್ತದೆ. ಬೆಳಗಿನ ಜಾವ ಎದ್ದು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು.ಹತ್ತು ಬಾರಿ ಓದುವ ಬದಲು ಎರಡು ಬಾರಿ ಬರೆದು ಅಭ್ಯಾಸ ಮಾಡಿದರೆ ವಿಷಯ ನೂರಕ್ಕೆ ನೂರರಷ್ಟು ಜ್ಞಾಪಕದಲ್ಲಿ ಉಳಿಯುತ್ತದೆ. ಸತತ ಪರಿಶ್ರಮ,ನಿಯಮಿತ ಓದು, ಏಕ್ರಾಗತೆ ಇವು ಉತ್ತಮ ಫಲಿತಾಂಶ ಪಡೆದುಕೊಳ್ಳಲು ಪೂರಕವಾದ ಅಂಶಗಳಾಗಿವೆ. ವಿದ್ಯಾರ್ಥಿಗಳು ಯಾವುದೇ ವಾಮ ಮಾರ್ಗ ಅನುಸರಿಸದೇ ಮುಕ್ತವಾಗಿ ಪರೀಕ್ಷೆ ಎದುರಿಸಿ ಹೆಚ್ಚು ಅಂಕಗಳಿಸುವ ಮೂಲಕ ನಿಮ್ಮ ಪಾಲಕರಿಗೆ, ಕಲಿಸಿದ ಶಿಕ್ಷಕರಿಗೆ ಕೀರ್ತಿ ತರುವಂಥ ಕೆಲಸ ಮಾಡಿ ಎಂದು ಹೇಳಿದರು.

Contact Your\'s Advertisement; 9902492681

ಉಪನ್ಯಾಸಕ ಗುರಲಿಂಗ ತುಂಗಳ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದಾಕ್ಷಣ ಮಕ್ಕಳಲ್ಲಿ ಒಂದು ರೀತಿಯ ತಳಮಳ ಇರುತ್ತದೆ. ಚೆನ್ನಾಗಿ ಅಭ್ಯಾಸ ಮಾಡಿದ ಮಕ್ಕಳೂ ಕೂಡಾ ಇದಕ್ಕೆ ಹೊರತಾಗಿ ಇರುವುದಿಲ್ಲ. ನಿಮ್ಮನ್ನು ನೀವು ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಜ್ಜುಗೊಳಿಸಿ, ಒಳ್ಳೆಯ ಅಂಕ ಪಡೆಯಬೇಕು. ಭವಿಷ್ಯದ ಉತ್ತಮ ಸಮಾಜಕ್ಕಾಗಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡುವ ಜವಾಬ್ದಾರಿ ಶಾಲೆಯಲ್ಲಿ ಶಿಕ್ಷಕರದ್ದಾದರೆ, ಮನೆಯಲ್ಲಿ ಪಾಲಕರದ್ದು. ಶಿಸ್ತು ಜೀವನದ ಅಡಿಪಾಯವಾಗಿದ್ದು, ಶಿಕ್ಷಕರನ್ನು ವಿನಯದಿಂದ ಗೌರವದಿಂದ ಕಾಣಿ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಆನಂದ ಕುಲಕರ್ಣಿ,ಬಸಪ್ಪ, ಉಪತಹಸೀಲ್ದಾರ ಹೇಮಾ ಚಿಕ್ಕಮಠ, ವಸತಿ ನಿಲಯದ ಮೇಲ್ವಿಚಾರಕ ರವಿಕುಮಾರ ಇತರರು ವೇದಿಕೆಯ ಮೇಲಿದ್ದರು.

ಅನಿತಾ ರಾಠೋಡ, ಭೀಮಾಶಂಕರ ದಂಡೆ, ಗುಂಡುರಾಯ, ಸಿದ್ರಾಮಪ್ಪ, ರಾಮಚಂದ್ರಪ್ಪ ಸನಗುಂದಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಯಶೋಧಾ ಮಸ್ಕಿ ಪ್ರಾರ್ಥಿಸಿದರು, ಶಿವಕುಮಾರ ಬಿರಾದಾರ ಸ್ವಾಗತಿಸಿದರು. ರವಿಕುಮಾರ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here