ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಂಗಡಿಯ ಮುಂದೆ ಚಿತ್ರರಚನೆ: ಮನೋಜ ಕುಮಾರ್

1
69

ಚಿತ್ತಾಪುರ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚಿತ್ತಾಪುರ ಪುರಸಭೆ ಪಟ್ಟಣದ ವಿವಿಧೆಡೆ ಕಿರಣಿ, ಮೆಡಿಕಲ್ ಅಂಗಡಿಗಳ ಮುಂದೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು 1 ಮೀಟರ್ ಚೌಕಾಕಾರದ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಕೊರೊನ್ ವೈರಸ್ ತಡೆಗಟ್ಟಲು ದೇಶದ ಎಲ್ಲಡೆ 21 ದಿನ ಲಕ್ ಡೌನ್ ಆಗಿದ್ದು ಈ ಹಿನ್ನೆಲೆಯಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಬಂದರೆ ವರ್ತಕರು ಮತ್ತು ಗ್ರಾಹಕರ ನಡುವೆ 1 ಮೀಟರ್ ಸಾಮಾಜಿಕ ಅಂತರ ನಿಯಮವನ್ನು ಪಾಲಿಸಲು ಅಗತ್ಯವಾಗಿದೆ ಎಂದು ಜನರಿಗೆ ಸರಳವಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಂಗಡಿಗಳ ಮುಂದೆ ಚಿತ್ರ ಬಿಡಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಪುರಸಭೆ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪಿಎಸ್ಐ ಶ್ರೀಶೈಲ್ ಅಂಬಾಟಿ, ಆರೋಗ್ಯ ಅಧಿಕಾರಿ ಆನಂದ್, ರೇವಣಸಿದ್ದಪ್ಪ, ರೆಡ್ಡಿ ಪೊಲೀಸ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here