ಕೊರೋನಾ ಹರಡದಂತೆ ತಡೆಗೆ ಎಲ್ಲರ ಸಹಕಾರ ಅಗತ್ಯ: ಲಿಂಗರಾಜ ಬಿರಾದಾರ

0
29

ಕಲಬರುಗಿ: ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಕೂರೋನಾ ವೈರಸ್ ತಡೆಗಟ್ಟಲು ಜನತೆಯ ಹಿತದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಲಾಕ್ ಡೌನ್ ಸೇರಿದಂತೆ ಆರೋಗ್ಯ ಸುರಕ್ಷತೆ ಕ್ರಮಗಳನ್ನು ಜನತೆಗೆ ಪಾಲಿಸುವಂತೆ ಭಾರತೀಯ ಜನತಾ ಪಕ್ಷದ ಕಲಬರುಗಿ  ಗ್ರಾಮಾಂತರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಗಳಾದ  ಲಿಂಗರಾಜ ಬಿರಾದಾರ್ ಮನವಿ ಮಾಡಿದ್ದಾರೆ

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು ಈಗಾಗಲೇ ವೈರಸ್ ತಡೆಗಟ್ಟಲು  ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯುಡಿಯೂರಪ್ಪನವರು ಮತ್ತು ಆರೋಗ್ಯ ಸಚಿವರು ಹಗಲಿರುಳು ಶ್ರಮಿಸುತ್ತಿದ್ದಾರೆ.  ಅನೇಕ  ಕಟ್ಟು ನಿಟ್ಟಿನ ಕ್ರಮ ದೊಂದಿಗೆ  ವೈದ್ಯರು ಮತ್ತು ವೈದ್ಯಕೀಯ ಚಿಕಿತ್ಸೆ ವಿಭಾಗದವರು ಶ್ರಮಿಸುತ್ತಿದ್ದು ಶುಚಿತ್ವಕ್ಕಾಗಿ ಪೌರ ಕಾರ್ಮಿಕರು, ಭದ್ರತೆಗಾಗಿ ಪೋಲಿಸ್ ಇಲಾಖೆ, ಜಾಗೃತಿಗಾಗಿ ಮಾಧ್ಯಮದವರು  ಕಾರ್ಯನಿರ್ವಹಿಸುತ್ತಿದ್ದು, ವಿಶೇಷವಾಗಿ ರೋಗ ಹರಡದಂತೆ ತಡೆಯುವುದು ಜನತೆಯ ಮುಖ್ಯ ಜವಾಬ್ದಾರಿ ಆಗಿದೆ.

Contact Your\'s Advertisement; 9902492681

ಕೆಲ ನಿಯಮಗಳನ್ನು ಪಾಲಿಸುವುದರಿಂದ ರೋಗ ನಿಯಂತ್ರಣ ಮಾಡಬಹುದಾಗಿದ್ದು ಇದಕ್ಕೆ ಜನರ ಸಹಕಾರ ಬಹಳ  ಮುಖ್ಯವಾಗಿದ್ದು ಜನರು ಮನೆಯಿಂದ ಹೊರ ಬರಬಾರದು ಮನೆಯಲ್ಲಿ ಸುರಕ್ಷಿತವಾಗಿ ಇದ್ದು ಜಿಲ್ಲಾಡಳಿತಕ್ಕೆ ಸಹಕರಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here