ಉಪ ಚುನಾವಣೆಯಲ್ಲಿ ಅಂತರದಿಂದ ಗೆಲ್ತೇವೆ: ಯಡಿಯೂರಪ್ಪ

0
97

ಕಲಬುರಗಿ: ಚಿಂಚೋಳಿ ಮತ್ತು ಕುಂದಗೋಳದಲ್ಲಿ 50 ರಿಂದ 60 ಸಾವಿರ ಮತದಾರರನ್ನು ಮಾತನಾಡಿಸಿದ್ದೇನೆ. ಎರಡೂ ಕಡೆ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲ್ತೇವೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದಾರೆ.

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಗದ್ದಲ ಉಲ್ಬಣಗೊಂಡಿದೆ, ಲೋಕಸಭೆ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಚೂರಿ ಹಾಕಿಕೊಂಡಿರೋದೆ ಇದಕ್ಕೆ ಕಾರಣ ಎಂದು ಆರೋಪಿಸಿದರು.

Contact Your\'s Advertisement; 9902492681

ವಿಶ್ವನಾಥ ಹೇಳಿಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಹೇಳಿಕೆಯಾಗಿದೆ, ಮೇ 23 ರ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಗದ್ದಲ ಉಲ್ಬಣಗೊಳ್ಳ ಲಿದೆ ಎಂದು ತಿಳಿಸಿದರು. ಶಮಿಶ್ರ ಸರಕಾರದಲ್ಲಿ ಕಚ್ಚಾಟ, ಬಡಿದಾಟದ ಫಲವಾಗಿ ಬಿಜೆಪಿಗೆ ಜನ ಹೆಚ್ಚಿನ ಒಲವು ವ್ಯಕ್ತವಾಗಿದೆ ಎಂದರು.

ತಾಕತ್ತಿದ್ದರೆ ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ತೀವೆ ಅಂತ ವೇಣುಗೋಪಾಲ್ ಹೇಳಲಲ್ಲಿ, ಬಿಜೆಪಿಯವರು ಕಾಂಗ್ರೆಸ್ ಗೆ ಹೋಗಲು ತಲೆಕೆಟ್ಟಿದೆಯಾ ಎಂದು ವೇಣುಗೋಪಾಲ್ ಅವರ ಹೇಳಿಕೆಗೆ ಅವರು ಕಿಡಿ ಕಾರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here