ಕೊರೋನಾ ಭೀತಿ: 887ನೇ ಬಸವ ಜಯಂತಿ ರದ್ದು: ಶರಣಕುಮಾರ ಮೋದಿ

0
64

ಕಲಬುರಗಿ: ವರ್ಷಂಪ್ರತಿ ಜಗಜ್ಯೋತಿ ಬಸವೇಶ್ವರ ಜಯಂತಿ ಜಿಲ್ಲಾಡಳಿತ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಂಯುಕ್ತ ಆಶ್ರಯದಲ್ಲಿ ಏಪ್ರೀಲ್ 26ರಂದು ಆಚರಿಸಲಿರುವ ಬಸವ ಜಯಂತಿ 887ನೇ ಉತ್ಸವ ಕೊರೋನಾ ತಡೆಗಟ್ಟುವ ನೀಟ್ಟಿನಲ್ಲಿ ಸಮಾಜದ ಮುಖಂಡರ, ಹಿರಿಯರ ಹಾಗೂ ಮಹಾಸಭಾ ಕಾರ್ಯಕಾರಿಣಿಯೊಂದಿಗೆ ಚರ್ಚಿಸಿ ಜಯಂತಿ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ, ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದ್ದಾರೆ.

ಇಂದು ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ತಲ್ಲಣಗೊಳಿಸಿದ್ದು, ಎಲ್ಲರೂ ಆತಂಕದಲ್ಲಿದ್ದೇವೆ. ನಾವೆಲ್ಲರೂ ಮನೆಯಲ್ಲಿದ್ದು, ಕೊರೊನಾ ವಿರುದ್ಧ ಹೋರಾಡಿ ನೆಲ ಸಮೇತ ಕಿತ್ತು ಹಾಕಬೇಕಿದೆ. ಹೀಗಾಗಿ ಪ್ರಸಕ್ತ ಸಾಲಿನ ಇದೇ 26ರ 887ನೇ ಬಸವ ಜಯಂತಿ ಆಚರಿಸದೇ ರದ್ದುಪಡಿಸಲು ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಇಲ್ಲವೇ ಮುಂದಿನ ವರ್ಷ ಬಸವ ಜಯಂತಿ ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕೊರೊನಾ ಸಂಪೂರ್ಣ ನಿಯಂತ್ರಣಗೊಳ್ಳಲಿ ಎಂಬುದೇ ಮಹಾಸಭಾದ ಬಯಕೆಯಾಗಿದೆ. ಹೀಗಾಗಿ ಪ್ರಸಕ್ತದ ಬಸವ ಜಯಂತಿಯನ್ನು ಜಿಲ್ಲಾಡಳಿತವೇ ಸಾಂಕೇತಿಕವಾಗಿ ಆಚರಿಸಲಿ. ಬಹು ಮುಖ್ಯವಾಗಿ ಬಸವ ಜಯಂತಿಗೆಂದು ಸರ್ಕಾರ ನೀಡುವ ಅನುದಾನ ಕೊವಿಡ್-19 ನಿಯಂತ್ರಿಸಲು ಉಪಯೋಗಿಸಬೇಕು. ಮಹಾಸಭಾವಲ್ಲದೇ ಇತರರೆಲ್ಲರೂ ಬಸವ ಜಯಂತಿ ಆಚರಿಸುತ್ತಿದ್ದರು. ಅವರೂ ಕೂಡಾ ಆಚರಿಸದೇ ತಮ್ಮ ಕೈಲಾದ ಮಟ್ಟಿಗೆ ಪರಿಹಾರ ನಿಧಿಗೆ ಸಹಾಯ ಸಲ್ಲಿಸುವರು ಈ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಶರಣ ಪಾಟೀಲ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here