ಕರೋನಾ ಸೊಂಕು ದೃಢಪಟ್ಟಿರುವ ಬಡಾವಣೆಗೆ ಎಸ್ಪಿ ಬೇಟಿ

0
49

ಶಹಾಬಾದ: ದೆಹಲಿ ದರ್ಗಾಕ್ಕೆ ಹೋಗಿಬಂದ ವ್ಯಕ್ತಿಯ ಹೆಂಡತಿಗೆ ಕೊರೊನಾ ವೈರಸ್ ಖಚಿತಪಟ್ಟಿರುವ ಹಿನ್ನೆಲೆಯಲ್ಲಿ ಆ ಬಡಾವಣೆಗೆ ಜಿಲ್ಲಾ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಮಡ್ಡಿ ರೇಲ್ವೆ ಗೇಟ್ ಬಡಾವಣೆ ಹೋಗುವ ರಸ್ತೆ ಹಾಗೂ ಹಳ್ಳದ ರಸ್ತೆ ಎರಡು ಕಡೆ ಬಡಾವಣೆಯ ಹೊರಗೆ ಹಾಗೂ ಒಳಗೆ ಹೋಗದಂತೆ ಸಂಪೂರ್ಣ ಬಂದ್ ಮಾಡಲಾಗಿದೆ. ಸೊಂಕಿತ ವ್ಯಕ್ತಿಗಳು ಹಾಗೂ ಸಂಪರ್ಕ ಹೊಂದಿದ ಜನರನ್ನು ಮನೆಯಿಂದ ಹೊರಬರದಂತೆ ಹೇಳಿದ್ದೆವೆ.ಅಲ್ಲದೇ ಇವರನ್ನು ನಿಗಾವಹಿಸಲು ಅಂಗನವಾಡಿ,ಆಶಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.

Contact Your\'s Advertisement; 9902492681

ಸೊಂಕಿತ ವ್ಯಕ್ತಿಯ ಕುಟುಂಬ ಸದಸ್ಯರಾದ ಮಗ, ಹೆಂಡತಿ, ಇಬ್ಬರು ಮೊಮ್ಮಕ್ಕಳನ್ನು ತಪಾಸಣೆ ಕಳಿಸಿಕೊಡಲಾಗಿತ್ತು. ಇನ್ನೂ ವರದಿ ಬಂದಿಲ್ಲ ಎಂದು ಅಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳೀಯ ಸೊಂಕಿತ ವ್ಯಕ್ತಿಯ ಜತೆ ಸಂಪರ್ಕ ಹೊಂದಿದ ಜನರನ್ನು ಕಟ್ಟುನಿಟ್ಟಾಗಿ ಕ್ವಾರಂಟೈಮ್‌ನಲ್ಲಿ ಇರುವಂತೆ ನಿಗಾವಹಿಸಿ.ಯಾವುದೇ ಕಾರಣಕ್ಕೂ ಬಡವಾಣೆಯ ಒಳಗಡೆ ಯಾರು ಬರದಂತೆ ಎಚ್ಚರಿಕೆ ವಹಸಿವುದಲ್ಲದೇ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಳ್ಳಿ.ಯಾವುದೇ ಕಾರಣಕ್ಕೂ ಸೊಂಕು ಹರಡದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹೇಳಿದರು.

ತಹಸೀಲ್ದಾರ ಸುರೇಶ ವರ್ಮಾ, ಪೌರಾಯುಕ್ತ ವೆಂಕಟೇಶ, ತಾಲೂಕಾ ಆರೋಗ್ಯ ಅಧಿಕಾರಿ ಸುರೇಶ ಮೇಕಿನ್, ಡಿವಾಯ್‌ಎಸ್‌ಪಿ ವೆಂಕನಗೌಡ ಪಾಟೀಲ, ಪಿಐ ಅಮರೇಶ.ಬಿ, ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here