ಕಳಪೆ ಕಾಮಗಾರಿ: ಸತೀಶ ಪಂಚಭಾವಿ ಆರೋಪ

0
96

ಶಹಾಪುರ: ಶಹಾಪುರ ಪಟ್ಟಣದ ವಿದ್ಯಾನಗರ ಬಡಾವಣೆಯಲ್ಲಿ ಬೋರ್ವೆಲ್ ಹಾಗೂ ಕುಡಿಯುವ ನೀರಿನ ಗುಮ್ಮಿಯ ಅಳವಡಿಕೆಯ ಕಾಮಗಾರಿಯಲ್ಲಿ ಸಂಪೂರ್ಣ ಕಳಪೆಯಾಗಿದೆ ಎಂದು ನಗರಸಭೆ ಸದಸ್ಯರಾದ ಸತೀಶ ಪಂಚಭಾವಿ ಆರೋಪಿಸಿದ್ದಾರೆ.

2017 – 18 ನೇ ಸಾಲಿನ ನಗರಸಭೆಯ 14 ನೇ ಹಣಕಾಸು ಯೋಜನೆಯಡಿಯಲ್ಲಿ ವಾರ್ಡ್ ನಂಬರ್ 13 ವಿದ್ಯಾನಗರ ಬಡಾವಣೆಯಲ್ಲಿ ಕಾಮಗಾರಿಯಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಹಣವನ್ನು ಅವ್ಯವಹಾರವಾಗಿದ್ದು ಕೂಡಲೆ ತನಿಖೆ ಮಾಡಬೇಕು.ಹಾಗೆ ಕೆಲವೊಂದು ಕಾಮಗಾರಿಗಳಿಗೆ ಬಣ್ಣ ಬಳಿದು ಕೈತೊಳೆದುಕೊಂಡಿದ್ದಾರೆ.

Contact Your\'s Advertisement; 9902492681

ಉದ್ಘಾಟನೆ ಆಗುವುದಕ್ಕಿಂತ ಮೊದಲೇ ಕಾಮಗಾರಿಯ ಗುಮ್ಮಿಗಳಿಂದ ನೀರು ಸೋರುತ್ತಿದ್ದು ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ನಗರಸಭೆ ಸದಸ್ಯ ಸತೀಶ್ ಪಂಚಭಾವಿ ಎಚ್ಚರಿಕೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here