ಉಸ್ತುವಾರಿ ಸಚಿವ ಪ್ರಭು ಚವಾಣ್ ಶಹಾಪುರಕ್ಕೆ ಭೇಟಿ

0
34

ಶಹಾಪುರ: ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಪಶು ಸಂಗೋಪನಾ ಇಲಾಖೆಯ ಸಚಿವರಾದ ಶ್ರೀ ಪ್ರಭು ಚವಾಣ್ ಅವರು ಇಂದು ಶಹಾಪುರಕ್ಕೆ ಭೇಟಿ ನೀಡಿ ಕರೋನಾ ವೈರಸ್ ಕುರಿತು ಮಾಹಿತಿ ಪಡೆದುಕೊಂಡರು.

ಕೇಂದ್ರ ಸರ್ಕಾರ ಮೇ ೩ ರವರಗೆ ಲಾಕ್ ಡೌನ್ ವಿಸ್ತರಿಸಿದ್ದು ಎಲ್ಲ ಸಾರ್ವಜನಿಕರು ಅದಕ್ಕೆ ಸಹಕರಿಸಬೇಕು ಎಂದು ಎಲ್ಲರಲ್ಲೂ ಕೈಮುಗಿದು ಮನವಿ ಮಾಡಿಕೊಂಡರು ಅನಾವಶ್ಯಕವಾಗಿ ಹೊರಗಡೆ ಬರಬಾರದು ಜತೆಗೆ ಪ್ರತಿಯೊಬ್ಬರು ಕೂಡ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರಾದ ರಾಜುಗೌಡ ಉಕ್ಕನಾಳ ರೈತರ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರೂ ತದನಂತರದಲ್ಲಿ ಹತ್ತಿ ಖರೀದಿಸಲು ಸರಕಾರವೇ ಮುಂದಾಗಬೇಕು ಈ ಮೂಲಕ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಹಾಪುರ ಜನಪ್ರಿಯ ಶಾಸಕರಾದ ಶರಣಬಸ್ಸಪ್ಪಗೌಡ ದರ್ಶನಾಪುರ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಸವಂತರೆಡ್ಡಿ ಸಾಹು ಹತ್ತಿಗುಡೂರು ಪರಶುರಾಮ ಕುರುಕುಂದಿ,ಸುಧೀರ್ ಚಿಂಚೋಳಿ ಅಲ್ಲದೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here