ದವಸ ಧಾನ್ಯ ಕಿಟ್ ಮನೆಮನೆಗೆ ವಿತರಣೆ: ರಾಜು ಪಂಚಭಾವಿ.

0
91

ಶಹಾಪುರ: ಕರೋನಾ ವೈರಸ್ ಕೊವೀಡ -19 ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಲಾಕ್ ಡೌನ್ ಯಾರೂ ಉಲ್ಲಂಘಿಸದೆ ಮನೆಯಲ್ಲೇ ಇರಿ ಅಗತ್ಯ ವಸ್ತುಗಳು ಬೇಕಾದಾಗ ನಮ್ಮ ನಂಬರಿಗೆ ಕರೆ ಮಾಡಿದರೆ ನಾವೇ ಖುದ್ದಾಗಿ ಮನೆಯ ಬಾಗಿಲಿಗೆ ದವಸ ಧಾನ್ಯಗಳ ಕಿಟ್ ತಲುಪಿಸುತ್ತೇವೆ ಎಂದು ಶ್ರೀ ಭವಾನಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರಾಜು ಪಂಚಭಾವಿ ಹೇಳಿದರು.

ವಾರ್ಡ್ ನಂಬರ್ ೧೩ ರ ವಿದ್ಯಾನಗರದಲ್ಲಿ ಬರುವ ಬಡವರಿಗೆ,ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಈ ದವಸ ಧಾನ್ಯ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಕೂಡಲೇ ಅಗತ್ಯ ಬಿದ್ದಲ್ಲಿ ಈ ನಂಬರ್ ಗೆ 9945718133, 9482230721 ಸಂಪರ್ಕಿಸಿದಾಗ ನಾವು ನಿಮ್ಮ ಮನೆ ಬಾಗಿಲಿಗೆ ಬಂದು ದವಸ ಧಾನ್ಯದ ಕಿಟ್ ತಲುಪಿಸುತ್ತೇವೆ.

Contact Your\'s Advertisement; 9902492681

ಅನಾವಶ್ಯಕವಾಗಿ ಹೊರಗಡೆ ಬಾರದೆ ಮನೆಯಲ್ಲಿ ಆರಾಮಾಗಿ ಕಾಲ ಕಳೆಯಿರಿ ಯಾವುದೇ ಕಾರಣಕ್ಕೂ ಹೊರಗಡೆ ಬಂದು ಪೊಲೀಸರೊಂದಿಗೆ ಹಾಗೂ ವೈದ್ಯರೊಂದಿಗೆ ವಾಗ್ವಾದ ಮಾಡಬೇಡಿ ಏಕೆಂದರೆ ಅವರು ನಮಗೋಸ್ಕರ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ ಅವರಿಗೆ ಗೌರವ ಕೊಡೋದು ನಮ್ಮ ಆದ್ಯ ಕರ್ತವ್ಯ ಎಂದು ಸಲಹೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here