ಹುಡುಗಿ ವಿಚಾರಕ್ಕೆ ಗದ್ದಲ: ಕೊಲೆಯಲ್ಲಿ ಅಂತ್ಯ

0
189

ಕಲಬುರಗಿ: ನಗರದ ಎಸ್‌ಟಿಬಿಟಿಯ ಮಾಂಗರವಾಡಿ ಹತ್ತಿರ ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ಮಧ್ಯೆ ಜಗಳ ಸಂಭವಿಸಿ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ನಿನ್ನೆ ನಡೆದಿದೆ.

ಚಿರಂಜೀವಿ(22) ಕೊಲೆಯಾದ ಯುವಕ, ನಿನ್ನೆ ಚಿರಂಜೀವಿ ಮತ್ತು ಆರೋಪಿ ಕಾಶಿನಾಥ ನಡುವೆ ಹುಡುಗಿ ವಿಚಾರಕ್ಕೆ ಜಗಳ ನಡೆದಿದ್ದು, ವಿಕೋಪಕ್ಕೆ ತಿರುಗಿದ ನಂತರ ಕಾಶೀನಾಥ್, ವಿಶ್ವನಾಥ್, ರಘುನಾಥ್ ಹಾಗೂ ಮೋಹನ್ ನಾಲ್ವರು ಚಿರಂಜೀವಿಯನ್ನು ಕೊಲೆ ಮಾಡಿದ್ದಾರೆಂದು ತಿಳಿದು ಬಂದಿದೆ.

Contact Your\'s Advertisement; 9902492681

ಘಟನೆಯಲ್ಲಿ ತೀವ್ರ ರಕ್ತಸಾವ್ರದಿಂದ ಬಳಲುತ್ತಿದ್ದ ಚಿರಂಜೀಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದ ಹಿನ್ನೆಲೆ ಕೊನೆಯುಸಿರೆಳೆದಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here