ಎಂ.ವಿ.ವಿ.ಹಾಗೂ ಎಂ.ಪಿ.ವೈ.ಹುಳಿಯಾರ ಕುಟುಂಬದ ವತಿಯಿಂದ ದಿನಸಿ ಕಿಟ್ ವಿತರಣೆ

0
36

ನಾಗಮಂಗಲ: ಪಟ್ಟಣದ ಎಂವಿವಿ ಹಾಗೂ ಎಂಪಿವೈ ಹುಳಿಯಾರ್ ಕುಟುಂಬದ ವತಿಯಿಂದ ನಾಗಮಂಗಲ ತಾಲ್ಲೂಕಿನ ಕಡುಬಡವರು ಹಾಗೂ ನಿರ್ಗತಿಕರಿಗೆ ಆಹಾರ ಕೀಟಗಳನ್ನು ವಿತರಿಸಲಾಗುತ್ತಿದೆ ಎಂದು ದಾನಿಗಳು ತಿಳಿಸಿದರು.

ಪಟ್ಟಣದ ಟಿಬಿ ಬಡಾವಣೆಯ ಕಡುಬಡವರು ವಾಸಿಸುವಂತಹ ಸುಭಾಷ್ ನಗರ ಕಾಲೋನಿ ನಾಗಮಂಗಲದ ಮಾರುತಿನಗರ ಸಂತೆ ಮೈದಾನದ ನಿವಾಸಿಗಳು ಟ್ಯಾಂಕ್ ಮೈದಾನದ ಗುಡಿಸಲು ನಿವಾಸಿಗಳಿಗೆ ಇಂದು ಆಹಾರಧಾನ್ಯದ ಕೀಟಗಳನ್ನು ವಿತರಿಸಲಾಯಿತು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾತನಾಡಿದ ಪಣಿ ಕಿರಣ ಕರುನಾ ವೈರಸ್ ಎಲ್ಲೆಡೆ ಹರಡಿ ಮಧ್ಯಮವರ್ಗದವರು ಮತ್ತು ದಿನನಿತ್ಯ ಕೂಲಿ ಮಾಡಿಕೊಂಡು ಬದುಕುವಂತಹ ಬಡವರಿಗೆ ನಿರ್ಗತಿಕರಿಗೆ ಬದುಕು ದುಃಖಕರವಾಗಿದೆ ಇಂತಹ ಸಮಯದಲ್ಲಿ ನಮ್ಮ ಕುಟುಂಬದ ವತಿಯಿಂದ ಹಾಗೂ ಶಾಸಕ ಸುರೇಶ್ ಗೌಡ ರವರ ನಿರ್ದೇಶನದಂತೆ ಆಹಾರಗಳನ್ನು ನಮ್ಮ ತಂಡದ ವತಿಯಿಂದ ಅವರನ್ನು ಗುರುತಿಸಿ ಅವಶ್ಯಕತೆ ಇರುವಂತಹ ಬಡವರ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ವಿತರಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ.

ದಯಮಾಡಿ ಕಡುಬಡವರು ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲೇ ಇದ್ದರೂ ಕೂಡ ನಮ್ಮ ನಂಬರ ಗೆ ಫೋನ್ ಮಾಡಿದರೆ ಆಹಾರಧಾನ್ಯವನ್ನು ವಿತರಿಸುತ್ತೇವೆ ಈ ಸಮಯದಲ್ಲಿ ಉಳ್ಳಂಥ ವ್ಯಕ್ತಿಗಳು ದಾನಧರ್ಮದ ಮೂಲಕ ಮಾನವ ಜನ್ಮಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿದರು.

ಆಹಾರ ಧಾನ್ಯ ವಿತರಣೆ ಸಂದರ್ಭದಲ್ಲಿ ಮುಖಂಡರಾದ ವಿನಯ್ ಲಕ್ಷ್ಮೀನಾರಾಯಣ್ ಕೆಂಪೇಗೌಡ ಪವಿತ್ರ ಹಾಗೂ ನಾಗಮಂಗಲ ವಾಸವಿ ಮಂಡಳಿ ಸದಸ್ಯರಾದ ಲಕ್ಷ್ಮಿ ಅನುಸೂಯ ಜ್ಯೋತಿ ಪ್ರಭ ವಾಣಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here