ಶಾಸಕ ಖರ್ಗೆ ವತಿಯಿಂದ ಅಗತ್ಯ ದಿನಸಿ ಕಿಟ್ ಹಂಚಿಕೆ

0
37

ಶಹಾಬಾದ: ನಗರದ ಕೊರೊನಾ ಕಂಟೋನಮೆಂಟ್ ಜೋನ್ ವ್ಯಾಪ್ತಿಯ ಹಾಗೂ ಇತರ ಪ್ರದೇಶದ ಬಡ ಕುಟುಂಬಗಳಿಗೆ ಅಗತ್ಯ ದಿನಸಿ ಕಿಟ್ ಹಾಗೂ ತರಕಾರಿಗಳನ್ನು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖಂಡ ವಿಜಯಕುಮಾರ ರಾಮಕೃಷ್ಣ ವಿತರಿಸಿದರು.

ಈ ಸಂದರ್ಭದಲ್ಲಿ ನಾವು ಹಸಿವಿನಿಂದ ಪರದಾಡುವ ಬಡ ಕುಟುಂಬಗಳಿಗೆ ಆಹಾರ ಮತ್ತು ತರಕಾರಿ ನೀಡುವ ಕೆಲಸಕ್ಕೆ ಮಹತ್ವ ನೀಡುತ್ತಿದ್ದೆವೆ ಮುಖಂಡರಾದ ವಿಜಯಕುಮಾರ ರಾಮಕೃಷ್ಣ ಹೇಳಿದರು.

Contact Your\'s Advertisement; 9902492681

ಕಿಟ್‌ನಲ್ಲಿ ೪ ಕೆಜಿ ಗೋಧಿ ಹಿಟ್ಟು, ಎಣ್ಣೆ ಪಾಕೆಟ್, ಮೇನಸಿನ ಪುಡಿ, ಅರಿಷಿಣ ಪುಡಿ, ಸಾಸಿವೆ, ಜೀರಿಗೆ ಒಳಗೊಂಡಿದೆ.ಅಲ್ಲದೇ ಟೊಮಾಟೋ,ಈರುಳ್ಳಿ,ಬೆಂಡಿಕಾಯಿ,ಚವಳಿಕಾಯಿ,ಬದನೆಕಾಯಿ,ಹಸಿ ಮೆಣಸಿನಕಾಯಿ ನೀಡಿದರು. ಇದೇ ಸಂದರ್ಭದಲ್ಲಿ ಸುಮಾರು ೨೫೦ ಬಡ ಕುಟುಂಬಗಳಿಗೆ ಕಿಟ್ ಹಾಗೂ ತರಕಾರಿಗಳನ್ನು ವಿತರಣೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್, ಡಾ.ಜಹೀರ್,ಹಾಷಮ್ ಖಾನ್, ಮೃತ್ಯುಂಜಯ್ ಹಿರೇಮಠ,ವಿಶ್ವರಾಧ್ಯ ಬೀರಾಳ, ಡಾ.ಅಹ್ಮದ್ ಪಟೇಲ್, ಅನ್ವರ್ ಪಾಷಾ, ಕುಮಾರ ಚವ್ಹಾಣ, ಫಜಲ್ ಪಟೇಲ್, ಇಮ್ರಾನ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here