25 ಸಂಸದರಿದ್ದರೂ ಕಾರ್ಮಿಕರಿಗಾಗಿ ಶ್ರಮಿಕ್ ರೈಲು ಬಿಡಿಸಲಾಗಿಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ಟೀಕೆ

0
139

ಕಲಬುರಗಿ: ರಾಜ್ಯದಲ್ಲಿ 25 ಸಂಸದರಿದ್ದರೂ ಕೂಡಾ ಕೂಲಿ ಕಾರ್ಮಿಕರನ್ನು ಕರೆತರಲು ಶ್ರಮಿಕ್ ರೈಲು ವ್ಯವಸ್ಥೆ ಮಾಡಲಾಗಿಲ್ಲ, ಬಸ್ ಪ್ರಯಾಣ ಸೇವೆ ಕೂಡಾ ಉಚಿತವಾಗಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡುವ ಮೂಲಕ ಕುಟುಕಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರಕಾರವಿದೆ ತಾವು ಇದನ್ನು ಕೇವಲ ಟ್ವಿಟರ್ ನಲ್ಲಿ ಹೇಳಿಕೊಂಡರೆ, ನಿಮ್ಮವರೇ ನಿಮ್ಮನ್ನು ‘ ಟ್ವಿಟರ್ ಜಾಧವ್’ ಎಂದು ನಾಮಕರಣ ಮಾಡಿಬಿಡ್ತಾರೆ ” ಅವರು ವ್ಯಂಗ್ಯ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಸರಕಾರದ‌ ಮುಖ್ಯ ಕಾರ್ಯದರ್ಶಿ ಹಾಗೂ ಕಂದಾಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ವಲಸೆ ಕಾರ್ಮಿಕರನ್ನು ತವರಿಗೆ ಕರೆತರಲು ಸರಕಾರದಿಂದ ಸೂಕ್ತ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ ಎಂದು ಜಾಧವ್ ಅವರು ಟ್ವಿಟ್ ಮಾಡಿದ್ದಕ್ಕೆ ಟಾಂಗ್ ಕೊಟ್ಟ ಶಾಸಕರು ತಮ್ಮನ್ನು ‘ಟ್ವಿಟರ್ ಖರ್ಗೆ’ ಎಂದು ವ್ಯಂಗ್ಯವಾಡಿದ್ದಕ್ಕೆ ಅದೇ ಹೆಸರನ್ನು ಪ್ರಸ್ತಾಪಿಸಿ ಪ್ರತಿವ್ಯಂಗ್ಯವಾಡುವ ಮೂಲಕ ಜಾಧವ್ ಅವರಿಗೆ ಅವರ ಪಕ್ಷದವರೇ ಟ್ವಿಟರ್ ಜಾಧವ್ ಎಂದು ನಾಮಕರಣ ಮಾಡುತ್ತಾರೆ ಹುಷಾರ್ ಎಂದು ಕುಟುಕಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here