ಕರ್ತವ್ಯ ಲೋಪ ಪಿ.ಎಸ್.ಐ ಅಮಾನತು

0
1048

ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಪೋತ್ತಂಗಲ್‌ ಗ್ರಾಮದಲ್ಲಿ ಈಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿ ಎಸ್.ಪಿ ಯಡಾ ಮಾರ್ಟಿನ್‌ ಓರ್ವ ಪಿ.ಎಸ್.ಐನ್ನು ಅಮಾನತು ಮಾಡಿ ನಿನ್ನೆ ಆದೇಶ ಹೊರಡಿಸಿದ್ದಾರೆ.

ಪೋತ್ತಂಗಲ್‌ ಗ್ರಾಮದಲ್ಲಿ ವಕೀಲ ನಾರಾಯಣ ರೆಡ್ಡಿ ಪಾಟೀಲ (60) ಜಗಳ ಬಿಡಿಸಲು ಹೋದಾಗ ಅವರನು ಗುಂಪೊಂದು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲೇಪೇಟ್ ಪಿ.ಎಸ್.ಐ ತಿಮ್ಮಯ್ಯ ಅವರು ಕರ್ತವ್ಯ ಲೋಪ ಮಾಡಿರುವುದು ಆರೋಪಕ್ಕೆ ಸಂಬಂಧಿಸಿದಂತೆ ಅಮಾನತು ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here