ಸುಟ್ಟ ಮನೆಗೆ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಭೇಟಿ ನೀಡಿ ನೆರವು

0
33

ಸುರಪುರ: ತಾಲೂಕಿನ ಮಾಚಗುಂಡಾಳ ಹೊರ ವಲಯದ ಚಿಗರಿಹಾಳ ಕ್ರಾಸ್ ಬಳಿಯಲ್ಲಿ ಮಂಗಳವಾರ ವಿದ್ಯೂತ್ ಶಾರ್ಟ್ ಸಕ್ರ್ಯೂಟ್‍ನಿಂದ ಮನೆ ಸುಟ್ಟು ಅಪಾರ ಹಾನಿಯುಂಟಾಗಿದ್ದ ಮಾನಪ್ಪ ಹೆಬ್ಬಾಳ ಮನೆಗೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಆಕಸ್ಮಿಕವಾಗಿ ವಿದ್ಯೂತ್ ತಗಲಿ ಮನೆ ಸುಟ್ಟಿದೆ,ಇದರಲ್ಲಿ ನಿಮ್ಮದೇನು ತಪ್ಪಿಲ್ಲ ಇದಕ್ಕೆ ತಾವೇನು ಚಿಂತಿಸಬೇಕಿಲ್ಲ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.ಮುಂಬರುವ ದಿನಗಳಲ್ಲಿ ನಿಮ್ಮ ಕುಟುಂಬಕ್ಕೆ ಸರಕಾರದಿಂದ ಮನೆಯನ್ನು ನಿರ್ಮಿಸಿ ಕೊಡುವಂತೆ ಕ್ರಮ ಕೈಗೊಳ್ಳಲು ತಾಲೂಕು ಆಡಳಿತಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.ಅಲ್ಲದೆ ನಿಮ್ಮ ದಾಖಲೆ ಪತ್ರಗಳು ಸುಟ್ಟಿರುವ ಬಗ್ಗೆ ಗೊತ್ತಾಗಿದ್ದು ಅವುಗಳನ್ನು ನೀಡುವಂತೆ ತಹಸೀಲ್ದಾರರಿಗೆ ತಿಳಿಸುವುದಾಗಿ ಭರವಸೆ ನೀಡಿದರು.

Contact Your\'s Advertisement; 9902492681

ನಂತರ ಸಂತ್ರಸ್ತರಿಗೆ 10 ಸಾವಿರ ರೂಪಾಯಿಗಳ ಧನ ಸಹಾಯ ಮಾಡಿದರು.ಈ ಸಂದರ್ಭದಲ್ಲಿ ಮುಖಂಡರಾದ ರಂಗನಗೌಡ ಪಾಟೀಲ್ ದೇವಿಕೇರಾ,ರಾಘವೇಂದ್ರ ಮಾಚಗುಂಡಾಳ,ಹರೀಶ ತ್ರಿವೇದಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here