ಈಜಲು ಹೋಗಿ ನಾಪತ್ತೆಯಾದ ಚಂದಪ್ಪ ಕೊಂಡಿಕಾರ ಶೋಧ ಎರಡನೆ ದಿನಕ್ಕೆ

0
139

ಸುರಪುರ: ಶುಕ್ರವಾರ ಮದ್ಹ್ಯಾನ ಕೃಷ್ಣಾ ನದಿಯಲ್ಲಿ ಈಜಾಡಲು ಹೋಗಿ ನಾಪತ್ತೆಯಾಗಿರುವ ತಾಲೂಕಿನ ಶೆಳ್ಳಗಿ ಗ್ರಾಮದ ಚಂದ್ಪಪ ಕೊಂಡಿಕಾರ ಪತ್ತೆಗಾಗಿ ಎರಡನೆ ದಿನವೂ ಶೋಧ ಕಾರ್ಯಾಚರಣೆ ಮುಂದುವರೆಸಲಾಯಿತು.

ಶನಿವಾರ ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಅಗ್ನಿ ಶಾಮಕ ದಳ ಮತ್ತು ಮೀನುಗಾರರು ಕೂಡ ದೋಣಿಯನ್ನು ಹತ್ತಿ ಮೀನಿನ ಬಲೆ ಮತ್ತು ಅಂತರಗಂಗೆಯನ್ನು ಎಸೆಯುವ ಮೂಲಕ ಹುಡುಕಾಟ ನಡೆಸಿದರು.ಸಂಜೆಯವರೆಗೂ ಹುಡುಕಾಟ ನಡೆಸಿದರು ನಾಪತ್ತೆಯಾದ ವ್ಯಕ್ತಿ ಪತ್ತೆಯಾಗಿಲ್ಲವೆಂದು ಗ್ರಾಮ ಲೆಕ್ಕಿಗ ದುಶಂತ ತಿಳಿಸಿದ್ದಾರೆ.

Contact Your\'s Advertisement; 9902492681

ಬೆಳಿಗ್ಗೆ ಘಟನಾ ಸ್ಥಳಕ್ಕೆ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಹಾಗು ಪೊಲೀಸ್ ಇನ್ಸ್ಪೇಕ್ಟರ್ ಸಾಹೇಬಗೌಡ ಎಂ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಚಂದಪ್ಪನ ಪತ್ತೆಗಾಗಿ ಬಂಡೊಳ್ಳಿ,ತಿಂಥಣಿ,ಅರಳಳ್ಳಿ ಮತ್ತಿತರೆಡಯಿಂದ ಉತ್ತಮ ಈಜುಗಾರರನ್ನು ಕರೆಯಿಸಿ ಹುಡುಕುವ ಪ್ರಯತ್ನ ನಡೆಸಲಾಗಿದ್ದು ಇನ್ನೂ ಕೂಡ ಪತ್ತೆಯಾಗಿಲ್ಲವೆಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here