ಪತ್ನಿಯನ್ನೇ ಕೊಂದು ಪರಾರಿಯಾದ ಪತಿರಾಯ

0
139

ಕಲಬುರಗಿ: ವರದಕ್ಷಿಣೆ ವ್ಯವಹಾರದ ವಿಚಾರವಾಗಿ ಕುಡಿದ ಮತ್ತಿನಲ್ಲಿ ಪತಿಯೊರ್ವ ಪತ್ನಿಯನ್ನೆ ಕೊಂದು ಪರಾರಿಯಾಗಿರುವ ಘಟನೆ ಚಿಂಚೋಳಿ ತಾಲೂಕಿನ ಅನ್ವರ ಗ್ರಾಮದಲ್ಲಿ ನಡೆದಿದೆ.

ಶ್ರೀದೇವಿ ಮಲ್ಲಪ್ಪ(36) ಕೊಲೆಯಾದ ದುರ್ದೈವಿ, ನಿನ್ನೆ ಮೃತ ಪತ್ನಿಯ ಪತಿ ಮಲ್ಲಪ್ಪ ಪೂಜಾರಿ ರಾತ್ರಿ ಕುಡಿದು ಬಂದು ತನ್ನ ವರದಕ್ಷಿಣೆ ವಿಚಾರವಾಗಿ ಶ್ರೀದೇವಿ ಮೇಲೆ ಹಲ್ಲೆ ನಡೆಸಿ, ದೊಣ್ಣೆ ಮತ್ತು ರಾಡ್ ದಿಂದ ಕೊಲೆಗೈದಿದ್ದು, ಪರಾರಿಯಾಗಿದ್ದಾನೆ.

Contact Your\'s Advertisement; 9902492681

17 ವರ್ಷದ ಹಿಂದೆ ಪ್ರಿತಿಸಿ ಮದುವೆಯಾದ ಇಬ್ಬರು ಪತ್ನಿಯ ಮನೆಯಿಂದ ಪಿತ್ರಾಜಿತ ಆಸ್ತಿ ವಿಚಾರವಾಗಿ ಆಗಾಗ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ತಡರಾತ್ರಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಈ ಕುರಿತು ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಲ್ಲಪ್ಪ ಅಲಿಯಾಸ್ ಮಲ್ಲಿಕಾರ್ಜುನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here