ಮದುವೆ ಸಮಾರಂಭದಲ್ಲಿ ಹಸಿರು ಸಂಭ್ರಮ

0
39

ಕಲಬುರಗಿ: ನಗರದ ಕೆಎಚ್ ಬಿ ಬಡಾವಣೆಯ ನಿವಾಸಿ ಶಿವಲೀಲಾ ರಮೇಶ ಕೋರಿಶೆಟ್ಟಿ  ದಂಪತಿಗಳ ಮಗ ವಿಶಾಲ ಅವರ ಮದುವೆಯು ಹಾವೇರಿಯ ಪೂರ್ಣಿಮಾ ಅವರೊಂದಿಗೆ ಮನೆಯಲ್ಲಿಯೇ ಸರಳವಾಗಿ, ಕೆಲವೇ ಜನರ ಸಮ್ಮುಖದಲ್ಲಿ ಜರುಗಿತು. ಈ ಸಂದರ್ಭದಲ್ಲಿ ವಧು-ವರು ಸಸಿಗೆ ನೀರೆರೆಯುವ ಮೂಲಕ‌ ಎಲ್ಲೆಡೆ ಗಿಡಮರಗಳನ್ನು ಬೆಳೆಸಿ, ಪರಿಸರವನ್ನು ಉಳಿಸಬೇಕೆಂಬ ಸಂದೇಶವನ್ನು ನೀಡಲಾಯಿತು. ಜೊತೆಗೆ ಸಸಿಗಳನ್ನು ಬೆಳೆಸುವ ಕಾರ್ಯ ಮಾಡುತ್ತೇವೆಂದು ವಧು-ವರರು ಹೇಳಿದರು.

ಈ ಸಂದರ್ಭದಲ್ಲಿ ಪ್ರೊ.ಎಚ್.ಬಿ.ಪಾಟೀಲ,  ಸಂಗಮೇಶ ಸರಡಗಿ‌, ಮಲ್ಲಮ್ಮ ಬೆಳಮಗಿ, ವೀರೇಶ  ಬೋಳಶೆಟ್ಟಿ ನರೋಣಾ, ಶಿವಕಾಂತ ಚಿಮ್ಮಾ ಕಲ್ಲಹಂಗರಗಾ, ನಾಗೇಂದ್ರಪ್ಪ ದಂಡೋತಿಕರ್, ಶಿವಲೀಲಾ ಕೋರಿಶೆಟ್ಟಿ, ಅಶೋಕ ಪಾಟೀಲ, ಬಸವರಾಜ ಹೆಳವರ್ ಯಾಳವಾರ, ಶ್ರೀನಿವಾಸ ಬುಜ್ಜಿ, ಸೋಮಶೇಖರ ಬಿ.ಮೂಲಗೆ, ಈರಯ್ಯ ಹಿರೇಮಠ, ಶಿವರಾಜ ಬಿರಬಿಟ್ಟಿ, ಶಿವಾನಂದ ಬುಜರಿ, ಶಿವಾನಂದ ಪೂಜಾರಿ, ದಿಲಿಪ ಬಕರೆ, ದೇವೇಂದ್ರಪ್ಪ ಗಣಮುಖಿ, ಬಸಯ್ಯ ಸ್ವಾಮಿ, ಸಿದ್ದಣ್ಣ ಸಾಬಣೆ ಉಪಸ್ಥಿತರಿದ್ದರು.

Contact Your\'s Advertisement; 9902492681

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here