ರಾಜ್ಯ ಸಭೆಗೆ ಕಾಂಗ್ರೆಸ್ ಪಕ್ಷದ ಸೂಕ್ತ ವ್ಯಕ್ತಿ ಡಾ.ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೆ ಅಭಿನಂದನೆ

0
47

ಕಲಬುರಗಿ: ಐದು ದಶಕಗಳಿಂದ ರಾಜಕೀಯವಾಗಿ ಪಕ್ಷ ನಿಷ್ಠೆದಿಂದ ಕೆಲಸ ಮಾಡಿದ್ದಾರೆ. ಕೇಂದ್ರದ ರೈಲ್ವೆ ಮತ್ತು ಕಾರ್ಮಿಕ ಖಾತೆಯ ಮಂತ್ರಿಯಾಗಿ ಮತ್ತು ರಾಜ್ಯ ಸರ್ಕಾರದ, ಗೃಹ, ಕಂದಾಯ, ಶಿಕ್ಷಣ, ನೀರಾವರಿ ಮತ್ತು ಅನೇಕ ಖಾತೆಗಳ ಸಚಿವರಾಗಿ, ಪಕ್ಷದ ಕೆಪಿಸಿಸಿ ಅಧ್ಯಕ್ಷರಾಗಿ, ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅನುಭವಿ ರಾಜಕೀಯ ನಾಯಕ, ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆ ಆಗಿದ್ದು. ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಮ್ಮೆಯ ವಿಷಯವಾಗಿದೆ.

Contact Your\'s Advertisement; 9902492681

ಅವರಿಗೆ ಟಿಕೆಟ್ ನೀಡಿದ ಖುಷಿಯಿಂದ ಇಂದು ಸಿಹಿ ಹಚ್ಚಿ ಸಂಭ್ರಮಿಸಿದರು.

ಅಫಜಲಪುರ ಕಾಂಗ್ರೆಸ್ ಪಕ್ಷದ ಬಾಕ್ಲ ಅಧ್ಯಕ್ಷ ಮಹಾತೇಶ ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ದೇವಿಂದ್ರಪ್ಪ ಮರತೂರ, ಮಾಜಿ ಜಿ.ಪಂ. ಸದಸ್ಯರಾದ ತುಕರಾಮ ಪಾಟೀಲ, ಮುಖಂಡರಾದ ಶಿವಶರಣಪ್ಪ ಕೋಬಾಳ, ಗು.ವಿ.ಕ ಮಾಜಿ ಸಿಡಿಕೇಟ್ ಸದಸ್ಯರಾದ ಸಂಗನಗೌಡ ಪಾಟೀಲ, ನೀಲಕಂಠ ಅವಂಟಿ, ಮಲ್ಲಿಕಾರ್ಜುನ ಅಜಗೊಂಡ ಸಾಹುಕಾರ, ವಸಂತ ನರಭೋಳ, ಲಕ್ಷ್ಮಪುತ್ರ ಜಮಾದಾರ, ಬಿ.ಎಂ.ಪಾಟೀಲ ಕಲ್ಲೂರ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here