ಚಿತ್ತಾಪುರ ತಾಲೂಕಿನ 22 ಜನ ಸೇರಿದಂತೆ 60 ಜನ ಗುಣಮುಖ

0
58

ಕಲಬುರಗಿ: ಚಿತ್ತಾಪುರ ತಾಲೂಕಿನ 22 ಜನ ಸೇರಿದಂತೆ ಜಿಲ್ಲೆಯ ಒಟ್ಟು 60 ಜನ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಶುಕ್ರವಾರ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರಲ್ಲಿ 9 ಜನ ಮಕ್ಕಳು ಸೇರಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

Contact Your\'s Advertisement; 9902492681

ಕಾಳಗಿ ತಾಲೂಕಿನ 12, ಚಿತ್ತಾಪುರ ತಾಲೂಕಿನ 22, ಅಫಜಲಪುರ ತಾಲೂಕಿನ 03, ಸೇಡಂ ತಾಲೂಕಿನ 14, ಚಿಂಚೋಳಿ ತಾಲೂಕಿನ 05, ಜೇವರ್ಗಿ, ಕಲಬುರಗಿ, ಶಹಾಬಾದ ಹಾಗೂ ಕಮಲಾಪುರ ತಾಲೂಕಿನ ತಲಾ ಓರ್ವರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 816 ಜನರಲ್ಲಿ 345 ಜನ ಗುಣಮುಖರಾಗಿದ್ದಾರೆ. ಉಳಿದಂತೆ 461 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here