ಶಹಾಬಾದ: ನೂತನ ಪೌರಾಯುಕ್ತರಾಗಿ ಕೆ.ಗುರಲಿಂಗಪ್ಪ ಅಧಿಕಾರ ಸ್ವೀಕಾರ

0
68

ಶಹಾಬಾದ: ನಗರಸಭೆಯ ನೂತನ ಪೌರಾಯುಕ್ತರಾಗಿ ಕೆ.ಗುರಲಿಂಗಪ್ಪ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ಪೌರಾಯುಕ್ತರಾದ ವೆಂಕಟೇಶ ಅವರು ತಮ್ಮ ಅಧಿಕಾರವನ್ನು ಕೆ.ಗುರಲಿಂಗಪ್ಪನವರಿಗೆ ಹಸ್ತಾಂತರಿಸಿ ಶುಭ ಕೋರಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆಯ ಪೌರಾಯುಕ್ತ ಕೆ.ಗುರಲಿಂಗಪ್ಪ, ನಗರದ ಮುಖಂಡರ ಜತೆ ಚರ್ಚಿಸಿ ಅಭಿವೃದ್ಧಿ ಬಗ್ಗೆ ಯೋಜನೆ ಹಾಕಿಕೊಳ್ಳಲಾಗುವುದು. ನಗರಸಭೆಯ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡಗಳಲ್ಲಿ ಕುಡಿಯುವ ನೀರಿನ ಉತ್ತಮ ವ್ಯವಸ್ಥೆ ನೀಡಲಾಗುವುದು. ಕೊರೊನಾ ಕಂಟಕವಾಗಿ ಕಾಡುತ್ತಿರುವುದರಿಂದ ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಈ ಹಿಂದೆ 2013-2016ರವರೆಗೆ ಶಹಾನಾದ ನಗರಸಭೆಯಲ್ಲಿಯೇ ಕಾರ್ಯನಿರ್ವಹಿಸಿದ್ದೆನೆ. ಇಲ್ಲಿನ ಸ್ಥಿತಿಗತಿಗಳ ಬಗ್ಗೆ ನನಗೆ ಅರಿವಿದ್ದು, ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೆನೆ ಎಂದರು.
ನಗರಸಭೆಯ ಕಛೇರಿಯ ಸಿಬ್ಬಂದಿ ವರ್ಗದವರು ವರ್ಗಾವಣೆಗೊಂಡ ಪೌರಾಯುಕ್ತ ವೆಂಕಟೇಶ ಅವರಿಗೆ ಬೀಳ್ಕೊಡಲಾಯಿತು. ನೂತನ ಪೌರಾಯುಕ್ತರಿಗೆ ಸ್ವಾಗತಿಸಿ, ಸನ್ಮಾನಿಸಲಾಯಿತು.

ಸಮುದಾಯ ಸಂಘಟನಾ ಅಧಿಕಾರಿ ರಘುನಾಥ ನರಸಾಳೆ, ಸಾಬಣ್ಣ ಸುಂಗಲಕರ್ ಇತರ ಸಿಬ್ಬಂದಿ ವರ್ಗವದರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here