ರೈತರ ಸಾಲ ಮನ್ನಾ ಮಾಡಿ ಹೊಸ ಸಾಲ ನೀಡಲು ಲೋಕ ಜನಶಕ್ತಿ ನಾಯಕ ಒತ್ತಾಯ

0
14

ಸುರಪುರ: ಈಗಾಗಲೆ ದೇಶದಲ್ಲಿ ಕೋವಿಡ್-೧೯ ಕೊರೊನಾ ವೈರಸ್ ಹಾವಳಿಯಿಂದಾಗಿ ರೈತರಿಗೆ ಸರಿಯಾಗಿ ಬೆಳೆ ಬಾರದೆ ರೈತರು ಕಂಗಾಲಾಗಿದ್ದಾರೆ.

ಅಲ್ಲದೆ ರೈತರ ಬಳಿಯಲ್ಲಿ ನಯಾ ಪೈಸೆ ಇಲ್ಲದೆ ಜೀವನ ನಡಸುವುದೆ ತೊಂದರೆಯಾಗಿರುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸಾಲ ವಸೂಲಾತಿ ಮಾಡದೆ,ಹೊಸ ಸಾಲ ನೀಡುವಂತೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ಅಪ್ಪಾರಾವ್ ನಾಯಕ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಈ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಕರಿಗೆ ಪತ್ರ ಬರೆಯುವ ಮೂಲಕ ಸರಕಾರಕ್ಕೆ ಒತ್ತಾಯಿಸಿರುವ ಅವರು,ಸರಕಾರ ರೈತರ ಅನುಕೂಲಕ್ಕಾಗಿ ಕೂಡಲೆ ಎಲ್ಲಾ ರೈತರ ಎಲ್ಲಾ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು ಹಾಗು ಈಗಾಗಲೆ ಮುಂಗಾರು ಚಟುವಟಿಕೆ ಆರಂಭಗೊಂಡಿರುವುದರಿಂದ ರೈತರಿಗೆ ಕೂಡಲೆ ಹೊಸ ಸಾಲ ನೀಡಲು ಮುಂದಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here