ಮೋದಿ ಸರಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ: ಯಲ್ಲಪ್ಪ ಚಿನ್ನಾಕಾರ

0
29

ಸುರಪುರ: ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಒಳ್ಳೆಯ ಅಭಿವೃಧ್ಧಿ ಕಾರ್ಯ ಮಾಡಿದೆ ಎಂದು ಅನೇಕರು ಮಾದ್ಯಮಗಳಲ್ಲಿ ಮಾತನಾಡುತ್ತಿದ್ದಾರೆ.ಆದರೆ ನಿಜಕ್ಕೂ ಮೋದಿಯವರ ಸರಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಪಿಎಂ ಮುಖಂಡ ಯಲ್ಲಪ್ಪ ಚಿನ್ನಾಕಾರ ಮಾತನಾಡಿದರು.

Contact Your\'s Advertisement; 9902492681

ನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಸಿಪಿಎಂ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತತ್ವ ವಹಿಸಿ ಮಾತನಾಡಿ,ಇಂದು ಕೊರೊನಾ ಸೊಂಕಿತರ ಸಂಖ್ಯೆ ದೇಶದಲ್ಲಿ ೩ ಲಕ್ಷ ಸಮೀಪಿಸಿದೆ ಆದರೆ ಕೊರೊನಾ ತಡೆಯುವಲ್ಲಿ ಸರಕಾರ ಒಳ್ಳೆ ಕೆಲಸ ಮಾಡಿದೆ ಎಂದು ಹೇಳುತ್ತಾರೆ ಯಾವುದು ಒಳ್ಳೆ ಕೆಲಸ ಎಂದು ಪ್ರಶ್ನಿಸಿದರು.ದೇಶದಲ್ಲಿನ ಲಕ್ಷಾಂತರ ಜನರು ಕೆಲಸವಿಲ್ಲದೆ ನಿತ್ಯವು ಒಂದೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.ಕೊರೊನಾ ಕಾರಣದಿಂದ ಹತ್ತು ಸಾವಿರದಷ್ಟು ಜನ ಸಾವಿಗೀಡಾಗಿದ್ದಾರೆ.ಸಾವಿರಾರು ಜನ ಕಾರ್ಮಿಕರು ಬೇರೆ ರಾಜ್ಯಗಳಿಂದ ತಮ್ಮ ಊರುಗಳಿಗೆ ನಡೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದಾರೆ ಇದು ಹೇಗೆ ಅಭೀವೃಧ್ಧಿಯಾಗುತ್ತದೆ? ಇಂದಿಗೂ ಕೊರೊನಾ ಸಂಕಷ್ಟ ಜನರನ್ನು ಕಾಡುತ್ತಿದ್ದು ಬಡ ಜನರು ಒಂದೊತ್ತಿನ ಊಟವಿಲ್ಲದಂತಾಗಿದ್ದಾರೆ ಇದುವಾ ಮೋದಿಯವರ ಅಭಿವೃಧ್ಧಿ ಎಂದು ಖಾರವಾಗಿ ಪ್ರಶ್ನಿಸಿದರು.

ಮದ್ಹ್ಯಾನ ೨ ಗಂಟೆಯ ಸುಮಾರಿಗೆ ಸೇರಿದ ಅನೇಕ ಜನ ಹೋರಾಟಗಾರರು ಕೇಂದ್ರ ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ದಾವಲಸಾಬ್ ನದಾಫ್,ರಫೀಕ ಸುರಪುರ,ಸುರೇಖಾ ಕುಲಕರ್ಣಿ,ಧರ್ಮಣ್ಣ ದೊರೆ,ನಸೀಮಾ,ರಾಧಾಬಾಯಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here