ದೇವಿಂದ್ರಪ್ಪ ಮಸುದೇವಪ್ಪ ನಾಯಕ ನಿಧನ

0
83

ಚಿಂಚೋಳಿ: ತಾಲೂಕಿನ ನಾಗಾಇದಾಲಾಯಿ ಗ್ರಾಮದ ದೇವೀಂದ್ರಪ್ಪ ತಂದೆ ಮಸುದೇವಪ್ಪ ಬುಧವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿ ಸೇರಿದಂತೆ ಅಪಾರ ಬಂಧುಬಳಗ ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಸ್ಚಗ್ರಾಮ ನಾಗಾಇದಾಲಾಯಿಯಲ್ಲಿ ನೆರವೇರಲಿದೆ.‌

ಸಂತಾಪ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಸಂಘದ ಹೈದರಾಬಾದ್ ಕರ್ನಾಟಕ‌ ವಿಭಾಗೀಯ ಅಧ್ಯಕ್ಷ ಹಾಗೂ ಮಾಜಿ ಉಪಮೇಯರ್ ನಂದಕುಮಾರ‌ ಮಾಲಿಪಾಟೀಲ್, ಅಖಿಲ ಕರ್ನಾಟಕ ವಾಲ್ಮೀಕಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾನಪ್ಪ ನಾಯಕ‌ ದೊರೆ, ವಾಲ್ಮೀಕಿಯ ನಾಯಕ ಸಮಾಜದ‌ ಮುಖಂಡರಾದ ಅಮರೇಶ ನಾಯಕ ಜಾಗೀರದಾರ, ಸಂಗಪ್ಪ ಸೇದಿಮನಿ, ಶರಣು ಸುಬೇದಾರ, ಶಿವರಾಜ ನಾಯಕ, ಅಮರೇಶ ನಾಯಕ ಗೋವ ಹೋಟೆಲ್ ಬೆಳಗಾವಿ, ದಿನೇಶ ಮದಕರಿ, ಅಶೋಕ್ ಕಾಳಮದ್ರಿ, ಯುವ ಪತ್ರಕರ್ತ ಪ್ರಕಾಶ ದೊರೆ ಸೇರಿದಂತೆ ಅನೇಕ ಗಣ್ಯರು ಕಂಬನಿ‌‌ ಮಿಡಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here