ನಗರಸಭೆ ಅಧಿಕಾರಿಗಳ ವಿರುದ್ಧ ದಲಿತ ಸೇನೆ ಪ್ರತಿಭಟನೆ ಕ್ರಮಕ್ಕೆ ಆಗ್ರಹ

0
86

ಸುರಪುರ: ನಗರಸಭೆ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ.ಜನ ಸಾಮಾನ್ಯರು ನಗರಸಭೆಗೆ ಬಂದರೆ ಹಣವಿಲ್ಲದೆ ಯಾವ ಕೆಲಸಗಳು ಆಗುತ್ತಿಲ್ಲವೆಂದು ಆರೋಪಿಸಿ ದಲಿತ ಸೇನೆ ಕಾರ್ಯಕರ್ತರು ನಗರಸಭೆ ಮುಂದೆ ಪ್ರತಿಭಟನಾ ಧರಣಿ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಧರಣಿಯ ನೇತೃತ್ವ ವಹಿಸಿದ್ದ ನಿಂಗಣ್ಣ ಗೋನಾಲ ಮಾತನಾಡಿ,ನಗರಸಭೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಮರೆತು ಭ್ರಷ್ಟರಾಗಿದ್ದಾರೆ.ಇಲ್ಲಿ ಹಣ ನೀಡಿದರೆ ಮಾತ್ರ ಕೆಲಸ ಇಲ್ಲವಾದರೆ ಏನು ಇಲ್ಲ ಎನ್ನುವಂತಾಗಿದೆ.ಈ ಅಧಿಕಾರಿಗಳ ವಿರುಧ್ಧ ಸರಕಾರವು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ದೀವಳಗುಡ್ಡದ ಬಡ ವ್ಯಕ್ತಿ ಮರೆಪ್ಪ ಗೊಲ್ಲರ ಎಂಬುವವರ ೨೭ ಗುಂಟೆ ಜಮೀನು ಮೋಸದಿಂದ ಬೇರೊಬ್ಬರ ಹೆಸರಿಗೆ ಖಾತೆ ಮಾಡಿ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಯನ್ನೂ ನೀಡಿ ಬಡವನ ಬದುಕು ನಿರ್ನಾಮ ಮಾಡಲು ನಗರಸಭೆ ಅಧಿಕಾರಿಗಳು ನಿಂತಿದ್ದಾರೆ.ಇಂತಹ ಅಧಿಕಾರಿಗಳ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ನಂತರ ಮಾಜಿ ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ ಮಾತನಾಡಿ,ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕರ್ತವ್ಯವೆಂದು ಕೆಲಸ ಮಾಡದೆ ಕೇವಲ ಹಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ.ನಿತ್ಯವು ನೂರಾರು ಜನರು ಬಂದು ಕೆಲಸವಾಗದೆ ಹಿಡಿಶಾಪ ಹಾಕುತ್ತಿದ್ದಾರೆ.ಅಲ್ಲದೆ ನಗರದ ಜನರ ಸಮ್ಯೆಗಳ ನಿವಾರಣೆಗೆ ನಗರಸಭೆ ಯಾವ ಕೆಲಸವನ್ನು ನಿರ್ವಹಿಸದೆ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.

ಸಾಯಂಕಾಲದ ವರೆಗೂ ಧರಣಿ ನಡೆಸಿದರು.ನಂತರ ಸಂಜೆ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಅವರು ದೀವಳಗುಡ್ಡದ ಮರೆಪ್ಪ ಎಂಬುವವರಿಗೆ ಆದ ಅನ್ಯಾಯವನ್ನು ಸರಿಪಡಿಸಿ ಅವರ ಜಮೀನಿನಲ್ಲಿ ಕಟ್ಟಡ ಪರವಾನಿಗೆ ನೀಡಿದ್ದನ್ನು ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ತಹಸೀಲ್ ಸಿರಸ್ತೆದಾರ ಸೋಮನಾಥ ನಾಯಕ ಅವರ ಮೂಲಕ ಮನವಿ ಸಲ್ಲಸಿ ಧರಣಿಯನ್ನು ನಿಲ್ಲಿಸಿದರು.

ಈ ಸಂದರ್ಭದಲ್ಲಿ ನಾಗು ಗೋಗಿಕರ್ ಶಿವಣ್ಣ ನಾಗರಾಳ ಮೌನೇಶ ಹುಣಸಿಹೊಳೆ ಹೊನ್ನಪ್ಪ ಕೋನಾಳ ಭೀಮಣ್ಣ ಕರಡಕಲ್ ಬಸವರಾಜ ಹಳ್ಳಿ ಹುಲಗಪಪ್ ದೇವತ್ಕಲ್ ಸುಭಾಸ ತೇಲ್ಕರ್ ಸದಾನಂದ ಬೊಮ್ಮನಳ್ಳಿ ಜಗದೀಶ ಯಕ್ತಾಪುರ ಗ್ಯಾನಪ್ಪ ಹುಣಸಿಹೊಳೆ ಗೋಪಾಲ ಗೋಗಿಕೆರ ಸೇರಿದಂತೆ ಮರೆಪ್ಪ ದೀವಳಗುಡ್ಡ ಮತ್ತವರ ಕುಟುಂಬಸ್ಥರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here