ಶಹಾಪುರ: ಬೆಂಗಳೂರಿನಲ್ಲಿ ಆಯೋಜಿಸಿರುವ ಕೆಪಿಸಿಸಿ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪ್ರತಿಜ್ಞಾ ಕಾರ್ಯಕ್ರಮವನ್ನು ಶಹಾಪುರದ ಕಾಂಗ್ರೆಸ್ ಮುಖಂಡರು ಜಯಾ ಸಭಾಂಗಣದಲ್ಲಿ ವೀಕ್ಷಣೆ ಮಾಡಿದರು.
ಅಧಿಕಾರ ವಹಿಸಿಕೊಂಡ ಡಿ.ಕೆ ಶಿವಕುಮಾರ್ ಮಾತನಾಡಿ ಕಾಂಗ್ರೆಸ್ ಪಕ್ಷದ ಮೇಲಿಟ್ಟಿರುವ ಎಲ್ಲರ ನಂಬಿಕೆ ಉಳಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಾದ್ಯಂತ ಬಲಪಡಿಸಿ ಅಧಿಕಾರಕ್ಕೆ ತರಲು ಶತ ಪ್ರಯತ್ನ ಮಾಡುವೆ ಅದಕ್ಕಾಗಿ ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ, ಹಿರಿಯ ಮುಖಂಡರಲ್ಲಿ, ಮತದಾರರಲ್ಲಿ, ಪ್ರತಿಜ್ಞಾ ಕಾರ್ಯಕ್ರಮದ ಮೂಲಕ ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮದ ವೀಕ್ಷಣೆಯಲ್ಲಿ ಹಿರಿಯ ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ, ಸಿದ್ದಲಿಂಗಣ್ಣ ಆನೆಗುಂದಿ, ಲಿಂಗಣ್ಣ ಪಡಶೆಟ್ಟಿ, ಬಸನಗೌಡ ಮಾಲಿ ಪಾಟೀಲ್ ಸಗರ, ಶರಣಪ್ಪ ಸಲದಾಪುರ, ಗುಂಡಪ್ಪ ತುಂಬಿಗಿ, ಹಾಗೂ ಇತರರು ಉಪಸ್ಥಿತರಿದ್ದರು