ಭಾರತಕ್ಕೆ ಮಾದರಿ ಸಂವಿಧಾನ ಬರೆದು ಕೊಟ್ಟ ಮಹಾಪುರುಷ ಅಂಬೇಡ್ಕರ: ನಿಂಗಣ್ಣ ಗೋನಾಲ

0
55

ಸುರಪುರ: ಭಾರತಕ್ಕೆ ಮಾದರಿ ಸಂವಿಧಾನ ಬರೆದು ಕೊಟ್ಟ ಮಹಾಪುರುಷ ಡಾ:ಬಾಬಾ ಸಾಹೇಬ್ ಅಂಬೇಡ್ಕರ ಅವರು.ಅಂತಹ ಮಹಾ ಪುರುಷನನ್ನು ಅಪಮಾನಿಸುವ ದುಷ್ಟ ಶಕ್ತಿಗಳಿರುವುದು ಕೇವಲ ಭಾರತದಲ್ಲಿ ಎಂಬುದು ನೋವಿನ ಸಂಗತೊಯಾಗಿದೆ ಎಂದು ದಲಿತ ಸೇನೆ ತಾಲೂಕು ಸಂಚಾಲಕ ನಿಂಗಣ್ಣ ಗೋನಾಲ ಬೇಸರ ವ್ಯಕ್ತಪಡಿಸಿದರು.

ಮುಂಬೈನ ದಾದರನಲ್ಲಿರುವ ಡಾ: ಬಿ.ಆರ್.ಅಂಬೇಡ್ಕರ ಅವರ ಮನೆಯ ಮೇಲೆ ದಾಳಿ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ದಲಿತ ಸೇನೆ ವತಿಯಿಂದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಡಾ:ಬಾಬಾ ಸಾಹೇಬ್ ಅಂಬೇಡ್ಕರರ ಮನೆಯ ಕಿಟಿಕಿ ಬಾಗಿಲು ಗಾಜು ಹೊಡೆದು,ಸಿಸಿ ಕ್ಯಾಮಾರ್ ದ್ವಂಸಗೊಳಿಸಿ ಮತ್ತು ಮನೆಯ ಹಿಂಬದಿಯಲ್ಲಿನ ಮುದ್ರಣಾಲಯವನ್ನು ದ್ವಂಸಗೊಳಿಸಿ ವಿಕೃತಿ ಮೆರೆದ ದುಷ್ಕರ್ಮಿಗಳನ್ನು ದೇಶದ್ರೋಹಿಗಳಡಿ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು ಮತ್ತು ಅಂಬೇಡ್ಕರರ ಮನೆಗೆ ಸೂಕ್ತ ಭದ್ರತೆ ಕಲ್ಪಿಸಬೇಕು.ಒಂದು ವೇಳೆ ಈ ನಮ್ಮ ಮನವಿಯನ್ನು ನಿರ್ಲಕ್ಷಿಸಿದಲ್ಲಿ ದೇಶಾದ್ಯಂತ ಇರುವ ಅಂಬೇಡ್ಕರರ ಅನುಯಾಯಿಗಳು ಮತ್ತು ಅಭಿಮಾನಿಗಳು ಉಗ್ರವಾದ ಪ್ರತಿಭಟನೆ ನಡೆಸಬೇಕಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಸುಭಾಷ ತೇಲ್ಕರ್ ಮಾನಪ್ಪ ಝಂಡದಕೇರಾ ತಾಯಪ್ಪ ಕನ್ನೆಳ್ಳಿ ಮೌನೇಶ ಹುಣಸಿಹೊಳೆ ನಾಗು ಗೋಗಿಕೆರಾ ಶಿವಣ್ಣ ನಾಗರಾಳ ಪ್ರಕಾಶ ಕೆಂಭಾವಿ ಶಿವಶಂಕರ ಗೋನಾಲ ಹುಲಗಪ್ಪ ದೇವತ್ಕಲ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here