ಅಂಬೇಡ್ಕರರ ರಾಜಗೃಹದ ಮೇಲೆ ದಾಳಿ ಮಾಡಿದ ಗೂಂಡಾಗಳನ್ನು ಕೂಡಲೆ ಬಂಧಿಸಿ: ಗೋಪಾಲ ತಳವಾರ

0
48

ಸುರಪುರ: ಜಗತ್ತಿನ ಅನೇಕ ರಾಷ್ಟ್ರಗಳ ಲಿಖಿತ ಮತ್ತು ಅಲಿಖಿತ ಸಂವಿಧಾನವನ್ನು ಅಭ್ಯಾಸ ಮಾಡಿ ಸುಮಾರು ಎರಡು ವರ್ಷಗಳ ಸತತ ಪರಿಶ್ರಮದಿಂದ ಭಾರತಕ್ಕೆ ಜಗತ್ತು ಮೆಚ್ಚಿದ ಸಂವಿಧಾನ ಬರೆದು ಕೊಟ್ಟ ಡಾ: ಬಾಬಾ ಸಾಹೇಬ್ ಅಂಬೇಡ್ಕರ ಅವರ ದಾದರ್‌ನ ರಾಜಗೃದ ಮೇಲೆ ದಾಳಿ ಮಾಡಿರುವುದು ಅಕ್ಷ್ಯಮ್ಯ ಕೃತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗೋಪಾಲ ತಳವಾರ ಮಾತನಾಡಿದರು.

ನಗರದ ತಹಸೀಲ್ ಕಚೇರಿ ಮುಂದೆ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಅಂಬೇಡ್ಕರ ಅವರ ಮಹಾ ಪರಿವಾಣದ ಮನೆಯನ್ನು ಮಹಾರಾಷ್ಟ್ರ ಸರಕಾರ ಮ್ಯೂಸಿಯಂನ್ನಾಗಿ ಮಾಡಿದೆ.ಈ ಮನೆಗೆ ನಿತ್ಯವು ಸಾವಿರಾರು ಜನ ಅಂಬೇಡ್ಕರರ ಅನುಯಾಯಿಗಳು ಭೇಟಿ ನೀಡುತ್ತಾರೆ.ಇಂತಹ ಮಹಾ ಪುರುಷರ ಮನೆಯ ಮೇಲೆ ಅಲ್ಲಿನ ಕೆಲ ಗೂಂಡಾಗಳು ದಾಂಧಲೆ ನಡೆಸಿರುವುದು ಖಂಡನಿಯವಾಗಿದೆ.ಕೂಡಲೆ ಮನೆಯ ಮೇಲೆ ದಾಂಧಲೆ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದರು.

Contact Your\'s Advertisement; 9902492681

ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಶರಣಪ್ಪ ವಾಗಣಗೇರಾ ರಾಮಚಂದ್ರಪ್ಪ ವಾಗಣಗೇರಾ,ಅಪ್ಪಣ್ಣ ಗಾಯಕವಾಡ ಫಕೀರಪ್ಪ ವಾಗಣಗೇರಾ ಗೋವಿಂದರಾಯಗೌಡ ಶಖಾಪುರ ಬಸವರಾಜ ತಳವಾರ ಬಸವರಾಜ ಚಿಂಚೋಳಿ ಶಿವಶರಣ ನಾಗರೆಡ್ಡಿ ಮರೆಪ್ಪ ಕಾಂಗ್ರೆಸ್ ಬಸವರಾಜ ಕೆಂಭಾವಿಕರ್ ಚನ್ನಪ್ಪ ತೀರ್ಥ ಮರೆಪ್ಪ ಮಲ್ಲಾ ಚಂದ್ರಪ್ಪ ಯಾಳಗಿ ಮರೆಪ್ಪ ಕಟ್ಟಿಮನಿ ಮಂಜುನಾಥ ಕೊಂಬಿನ ಬಸವರಾಜ ಕಿರದಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here