ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣವಾಗುತ್ತಿರುವ ಮನೆಗಳು ಕಳಪೆ-ಕಿರಣ ಚವ್ಹಾಣ ಆರೋಪ

0
214

ಶಹಾಬಾದ:ನಗರದ ವಾರ್ಡ ನಂ.12ರ ಬಂಜಾರ ನಗರದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡವರಿಗಾಗಿ ನಿರ್ಮಿಸುತ್ತಿರುವ ಮನೆಗಳನ್ನು ಗುತ್ತಿಗೆದಾರ ಕಳಪೆ ಮಟ್ಟದಿಂದ ನಿರ್ಮಾಣ ಮಾಡುತ್ತಿರುವುದಲ್ಲದೇ ಬಡವರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಕಿರಣ ಚವ್ಹಾಣ ಆರೋಪಿಸಿದ್ದಾರೆ.
ಬಂಜಾರಾ ನಗರದಲ್ಲಿ ಸುಮಾರು 250 ಮನೆಗಳನ್ನು ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ.ಅದನ್ನು ಗುತ್ತಿಗೆ ಹಿಡಿದ ಗುತ್ತಿಗೆದಾರ ಕಳಪೆ ಮಟ್ಟದಲ್ಲಿ ನಿಮರ್ಾಣ ಮಾಡುತ್ತಿದ್ದಾನೆ. ಅಲ್ಲದೇ ಗುಣಮಟ್ಟದ ಸಾಮಗ್ರಿಗಳು ಬಳಸುತ್ತಿಲ್ಲ. ಫಲಾನುಭವಿಗಳ ಹತ್ತಿರ ನಿವೇಶನಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಪಡೆಯುತ್ತಿಲ್ಲ. ಮನೆ ಕಟ್ಟುವ ಮುಂಚೆ ರಸ್ತೆ ಮತ್ತು ಚರಂಡಿಗೆ ಜಾಗ ಪರಿಶೀಲಿಸಿ ಕಟ್ಟಬೇಕು.ಆದರೆ ಈ ನಿಯಮ ಪಾಲಿಸುತ್ತಿಲ್ಲ. ಯಾರ ನಿವೇಶನ ಎಲ್ಲಿದೆ. ಅದು ಎಷ್ಟಿದೆ ಎಂದು ಪರಿಶೀಲನೆ ಮಾಡದೇ ಮನೆಗಳನ್ನು ಕಟ್ಟಲು ಪ್ರಾರಂಭಿಸಿದ್ದಾರೆ.


ಈ ವಾರ್ಡನಲ್ಲಿ ಎಲ್ಲಾ ಸಮಾಜದ ಬಡ ಕೂಲಿ ಕಾರ್ಮಿಕರಿದ್ದಾರೆ. ಆದರೆ ದುರದೃಷ್ಟದ ಸಂಗತಿಯೆಂದರೆ ಕೇವಲ ಒಂದೇ ಸಮಾಜದ ಜನರಿಗೆ ಸೌಲಭ್ಯ ನೀಡುತ್ತಿರುವುದು ವಿಪರ್ಯಾಸ.ಅಲ್ಲದೇ ಒಂದು ಕುಟುಂಬಕ್ಕೆ ಒಂದು ಮನೆ ನಿರ್ಮಿಸಲು ಸರ್ಕಾರ ಆದೇಶ ಮಾಡಿದೆ.ಆದರೆ ಇಲ್ಲಿ ದುಡ್ಡು ಕೊಟ್ಟರೇ ಒಂದೇ ಕುಟುಂಬದ ಹಲವರಿಗೆ ಮನೆಗಳನ್ನು ಕಟ್ಟಿಕೊಡಲು ಮುಂದಾಗಿದ್ದಾರೆ.ಫಲಾನುಭವಿಗಳ ಪಟ್ಟಿಯಲ್ಲಿ ಬೇರೆಯವರ ಹೆಸರುಗಳನ್ನು ಸೇರ್ಪಡೆಗೊಳಿಸುತ್ತಿರುವುದು ಕಂಡು ಬರುತ್ತಿದೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಬಂಜಾರಾ ನಗರದಲ್ಲಿ ಮನೆಗಳನ್ನು ನಿರ್ಮಿಸಲು ಅನುಮತಿ ನೀಡಿದೆ. ಆದರೆ ಹಣ ಪಡೆದು ಬೇರೆ ವಾರ್ಡನಲ್ಲಿ ಮನೆಗಳನ್ನು ಕಟ್ಟಲು ಪ್ರಾರಂಭ ಮಾಡುತ್ತಿದ್ದಾರೆ. ಕೂಡಲೇ ಕಳಪೆ ಕಾಮಗಾರಿ ಮಾಡಿದ,ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ ಗುತ್ತಿಗೆದಾರನ ಪರವಾನಗಿ ರದ್ದುಗೊಳಿಸಿ, ಕಪ್ಪು ಪಟ್ಟಿಗೆ ಹಾಕಬೇಕು. ಸಂಬಂಧಪಟ್ಟ ಅಧಿಕಾರಿಗಳಾದ ಜೆಇ, ಎಇಇ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ದೂರು ಸಲ್ಲಿಸಿದ್ದಾರೆ.ಅಲ್ಲದೇ ಒಮ್ಮೆ ಸ್ಥಳಕ್ಕೆ ಬೇಟಿ ನೀಡಿ ಸತ್ಯಾಸತ್ಯತೆಯನ್ನು ಅರಿತು ಕ್ರಮಕೈಗೊಳ್ಳಿ ಎಂದು ಕಿರಣ ಚವ್ಹಾಣ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here