ಡಾ.ಮಲ್ಲಿಕಾರ್ಜುನ ಖರ್ಗೆ ಜನ್ಮ ದಿನದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

0
64

ಕಲಬುರಗಿ: ಹೈದ್ರಾಬಾದ್ ಕರ್ನಾಟಕ 371(J) ಕಲಂ ತಿದ್ದುಪಡಿ ರೂವಾರಿಗಳು, ಕೇಂದ್ರದ ಮಾಜಿ ಸಚಿವರು, ರಾಷ್ಟ್ರೀಯ ನಾಯಕರು, ರಾಜ್ಯ ಸಭಾ ಸದಸ್ಯರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 78 ನೇಯ ವರ್ಷದ ಜನ್ಮ ದಿನದ ಅಂಗವಾಗಿ ಇಂದು ಅಫಜಲಪುರ ತಾಲೂಕಿನ ಮಲ್ಲಾಬಾದ, ಲಕ್ಷ್ಮಿಗುಡಿ ಹತ್ತಿರದ “ಜ್ಞಾನ ಭಾರತಿ ಶಿಕ್ಷಣ ಸಂಸ್ಥೆ”ಯ ಆವರಣದಲ್ಲಿ ತೆಂಗಿನ ಗಿಡ ನೆಡುವ ಮೂಲಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಪಾಟೀಲ ಅಫಜಲಪುರ ಅವರು ಚಾಲನೆ ನೀಡಿ, ಕೊರೋನಾ ಕಾಲದಲ್ಲಿ ಅತ್ಯಂತ ಸರಳವಾಗಿ ಜನ್ಮ ದಿನದ ಆಚರಣೆ ಮಾಡಲಾಗಿದೆ ಎಂದು ಮಹಾಂತೇಶ ಪಾಟೀಲ ಹೇಳಿದರು. ಬಿ.ಎಂ.ಪಾಟೀಲ ಕಲ್ಲೂರ ಮತ್ತು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here