ಮಾದಿಗ ಯುವ ಸೇನೆ ರಾಜ್ಯಾಧ್ಯಕ್ಷನ ಜನುಮ ದಿನಾಚರಣೆ ಅಂಗವಾಗಿ ಕೋವಿಡ್ ಜಾಗೃತಿ

0
85

ಸುರಪುರ: ಮಾದಿಗ ಯುವ ಸೇನೆಯ ರಾಜ್ಯಾಧ್ಯಕ್ಷ ನಂದಕುಮಾರ ಕನ್ನೆಳ್ಳಿ ತಮ್ಮ ೪೪ನೇ ಜನುಮ ದಿನದ ಅಂಗವಾಗಿ ನಗರದ ದೀವಳಗುಡ್ಡದಲ್ಲಿ ಜನ ಜಾಗೃತಿ ನಡೆಸುವ ಮೂಲಕ ಆಚರಿಸಿಕೊಂಡರು.

ನಂದಕುಮಾರ ಅವರ ಹಿತೈಸಿಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಸದ್ಯ ಜಗತ್ತಿನಲ್ಲಿ ಕೊರೊನಾ ಬಾಧಿಸುತ್ತಿದೆ ಇಂತಹ ಸಂದರ್ಭದಲ್ಲಿ ನನ್ನ ಜನುಮ ದಿನ ಆಚರಿಸಿಕೊಳ್ಳಬಾರದೆಂದು ಈ ಮುಂಚೆಯೆ ಹೇಳಿದ್ದೆ,ಆದರೆ ನೀವೆಲ್ಲ ಆತ್ಮೀಯರು ನನಗೆ ಗೊತ್ತಿಲ್ಲದೆ ಕಾರ್ಯಕ್ರಮವನ್ನು ಆಯೋಜಿಸಿದ್ದಿರಿ ಅದಕ್ಕಾಗಿ ನಿಮಗೆಲ್ಲರಿಗು ಋಣಿಯಾಗಿರುವೆ ಎಂದರು.ಅಲ್ಲದೆ ನನಗೆ ಇಂದು ನನ್ನ ಜನುಮ ದಿನ ಆಚರಿಸಿಕೊಳ್ಳುವ ಬದಲು ನಮ್ಮ ಜನರ್ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ.

Contact Your\'s Advertisement; 9902492681

ಈ ಕಾರ್ಯಕ್ರಮವನ್ನು ನಮ್ಮವರ ಜಾಗೃತಿ ಕಾರ್ಯಕ್ರಮವನ್ನಾಗಿ ಆಚರಿಸೋಣ ಎಂದು.ನಮ್ಮ ಜನರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಹಾಗು ಎಲ್ಲಾ ಜಾತಿ ಧರ್ಮಗಳ ಜನರೊಂದಿಗೆ ಸಹೋದರತೆಯೊಂದಿಗೆ ಬದುಕುವುದನ್ನು ಕಲಿಸಿ,ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ ಎಲ್ಲಾ ಸಮುದಾಯದೊಂದಿಗೆ ಬೆರೆತು ನಮಗೆ ಸರಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳೋಣ ಎಂದರು.

ಇದೇ ಸಂದರ್ಭದಲ್ಲಿ ದೀವಳಗುಡ್ಡದಲ್ಲಿನ ಮಾದಾರ ಚನ್ನಯ್ಯ ಮತ್ತು ಬಾಬು ಜಗಜೀವನರಾಮ್ ಅವರ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ನಮಿಸಿದರು.ಈ ಸಂದರ್ಭದಲ್ಲಿ ನ್ಯಾಯವಾದಿ ಯಲ್ಲಪ್ಪ ಹುಲಕಲ್,ಪಂಡೀತ ನಿಂಬೂರ,ನಿಂಗಣ್ಣ ಬುಡ್ಡಾ,ಬಸವರಾಜ ಮುಷ್ಠಳ್ಳಿ,ಚಂದ್ರಶೇಖರ ದೀವಳಗುಡ್ಡ,ಶರಣು ಸತ್ಯಂಪೇಟೆ,ಬಸವರಾಜ ಲಕ್ಷ್ಮೀಪುರ,ಹುಲಗಪ್ಪ ಶೆಳ್ಳಿಗಿ,ಸಿದ್ದು ಯಡಹಳ್ಳಿ,ಪರಶುರಾಮ ಬೈಲಾಪುರ ಹಾಗು ಎಮ್ ಸ್ಟಾರ್ ಬಾಯ್ಸ್ ತಂಡದ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here